ಕರ್ನಾಟಕ

ಸಂವಿಧಾನ ದಿನ: ಸಿಎಂರಿಂದ ಪ್ರತಿಜ್ಞಾ ವಿಧಿ ಬೋಧನೆ

Pinterest LinkedIn Tumblr

CM Siddaramaiah seen along with Minister TB Jayachandra and others during the Constitution Day celebrations at Vidhana Soudha in Bengaluru on Thursday Nov 26 2015 - KPN ### Constitution Day at Vidhana Soudha

ಬೆಂಗಳೂರು, ನ. 26: ಸಂವಿಧಾನ ದಿನದ ಅಂಗವಾಗಿ ವಿಧಾನಸೌಧದ ಬ್ಯಾಂಕ್ವೆಟ್ ಸಭಾಂಗಣದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದ್ಧರಾಮಯ್ಯ ಸಚಿವಾಲಯದ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು.

ಸ್ವಾತಂತ್ರ್ಯಾ ನಂತರ, 1949ರ ನ.26ರಂದು ಭಾರತ ಸಂವಿಧಾನವನ್ನು ಅಂಗೀಕರಿಸಿದ ಸಂಸ್ಮರಣೆಯ ಪ್ರಯುಕ್ತ ಸಂವಿಧಾನ ದಿನದ ಸಮಾರಂಭವನ್ನು ಆಯೋಜಿಸಲಾಗಿತ್ತು.

ಸಮಾರಂಭದಲ್ಲಿ ಕಾನೂನು ಸಚಿವ ಜಯಚಂದ್ರ, ಸಿಎಂ ಸಂಸದೀಯ ಕಾರ್ಯದರ್ಶಿ ಕೆ.ಗೋವಿಂದ ರಾಜ್, ಮೇಲ್ಮನೆ ಸದಸ್ಯರಾದ ಉಗ್ರಪ್ಪ, ಆರ್.ವಿ.ವೆಂಕಟೇಶ್, ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಕೌಶಿಕ್ ಮುಖರ್ಜಿ, ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಪ್ರಧಾನ ಕಾರ್ಯದರ್ಶಿ ಡಾ.ಇ.ವಿ.ರಮಣ ರೆಡ್ಡಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

Write A Comment