ಕರ್ನಾಟಕ

ಟೀಗಾಗಿ ಜೈಲಿನಲ್ಲಿ ಡೈಲಾಗ್ ಹೊಡೆದ ಹುಚ್ಚ ವೆಂಕಟ್ !

Pinterest LinkedIn Tumblr

huccha

ಆನೇಕಲ್: ಅಂಬೇಡ್ಕರ್ ಬಗ್ಗೆ ಹಗುರವಾಗಿ ಮಾತನಾಡಿ, ಈಗ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟ, ಬಿಗ್ ಬಾಸ್ ಖ್ಯಾತಿಯ ಹುಚ್ಚ ವೆಂಕಟ್ ಜೈಲು ಸಿಬ್ಬಂದಿ ಜೊತೆ ಟೀಗಾಗಿ ಗುಟುರು ಹಾಕಿ ಮತ್ತೆ ಸುದ್ದಿಯಲ್ಲಿದ್ದಾರೆ.

` `ನಾನೇನು ಕ್ರಿಮಿನಲ್ಲಾ? ಟೈಂಗೆ ಸರಿಯಾಗಿ ಟೀ ಕೊಡಬೇಕ್. ಗೊತ್ತಾಯ್ತ ಎಂದು ಡೈಲಾಗ್ ಬಿಟ್ಟಿದ್ದಾರೆ ಎಂದು ಹೆಸರು ತಿಳಿಸಲು ಇಚ್ಛಿಸದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇದು ಮುದ್ದೆ ಮುರಿಯುವ ಕೈಯಲ್ಲ. ಮಧ್ಯಾಹ್ನ ಹೊರಗಿನಿಂದ ಊಟ ತರಬೇಕು ಎಂದು ವರಾತ ತೆಗೆದರಂತೆ. ಪೊಲೀಸ್ ಭಾಷೆಯಲ್ಲಿ ಉತ್ತರ ಬಂದ ನಂತರ ಚೇತರಿಸಿಕೊಂಡ ಹುಚ್ಚ ವೆಂಕಟ್, ಕನ್ನಡ, ಇಂಗ್ಲಿಷ್ ಮಿಕ್ಸಿಂಗ್ ನಲ್ಲಿ ವಾಗ್ವಾದ ಮುಂದುವರಿಸಿದರಂತೆ. ತನ್ನ ಮನವಿಗೆ ಸ್ಪಂದಿಸಿ ಸಹಕರಿಸದಿದ್ದರೇ ಉಪವಾಸ ಕೂರುವ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.

Write A Comment