ಕರ್ನಾಟಕ

ಹೆಬ್ಬಾಳ ಬಿಜೆಪಿ ಶಾಸಕ ಜಗದೀಶ್ ಕುಮಾರ್ ನಿಧನ

Pinterest LinkedIn Tumblr

jagadihkumarಬೆಂಗಳೂರು: ಹೆಬ್ಬಾಳ ಬಿಜೆಪಿ ಶಾಸಕ ಆರ್. ಜಗದೀಶ್ ಕುಮಾರ್ ಅವರು ಸೋಮವಾರ ಹೃದಯಾಘಾತದಿಂದ ನಿಧನರಾಗಿದ್ದಾರೆ.

ಇಂದು ಬೆಳಗ್ಗೆ ವಿಧಾನಸೌಧಕ್ಕೆ ಆಗಮಿಸಿದ್ದ ಜಗದೀಶ್ ಕುಮಾರ್ ಅವರಿಗೆ ಮಧ್ಯಾಹ್ನದ ನಂತರ ಎದೆ ನೋವು ಕಾಣಿಸಿಕೊಂಡಿದೆ. ಕೂಡಲೇ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ.

ವಿಧಾಸಭೆ ಕಲಾಪಕ್ಕೆ ಯಾವಾಗಲೂ ಕೇಸರಿ ಶಾಲು ಧರಿಸಿ ಬರುತ್ತಿದ್ದ 58 ವರ್ಷದ ಜಗದೀಶ್ ಅವರು, ಕಲಾಪದಲ್ಲಿ ವಿನೂತನವಾಗಿ ಪ್ರತಿಭಟಿಸುವ ಮೂಲಕ ಗಮನ ಸೆಳೆಯುತ್ತಿದ್ದರು.

ಜಗದೀಶ್ ಅವರು ಮಾಜಿ ಸಚಿವ ಕಟ್ಟಾ ಸುಬ್ರಮಣ್ಯ ನಾಯ್ಡು ಅವರ ಕಟ್ಟಾ ಬೆಂಬಲಿಗರಾಗಿದ್ದರು.

ಕಲಾಪ ಮಂದೂಡಿಕೆ: ವಿಷಯ ತಿಳಿಯುತ್ತಿದಂತೆ ವಿಧಾನಸಭಾ ಕಲಾಪವನ್ನು ಮೊಟಕುಗೊಳಿಸಿದ  ಸ್ಪಿಕರ್‌ ಕಾಗೋಡು ತಿಮ್ಮಪ್ಪ ಅವರು ನಿಧನರಾದ ಶಾಸಕ ಜಗದೀಶ್‌ ಅವರಿಗೆ ಸಂತಾಪ ಸೂಚಿಸಿ, ನಾಳೆ ನಡೆಯುವ ಕಲಾಪವನ್ನು ಮುಂದೂಡಿದರು.

Write A Comment