ಬೆಂಗಳೂರು,ನ.16- ನಮ್ಮ ಮೆಟ್ರೋಗೆ ಇಂದು ನೇರಳೆ ಬಣ್ಣದ ರೀಚ್-2 ಎಂಬ ಹೊಸ ಮೆಟ್ರೋ ರೈಲು ಸೇರ್ಪಡೆಗೊಂಡಿದೆ. ಮಾಗಡಿರಸ್ತೆ, ಹೊಸಳ್ಳಿ, ವಿಜಯನಗರ, ಅತ್ತಿಗುಪ್ಪೆ, ದೀಪಾಂಜಲಿನಗರ, ಮೈಸೂರು ಮಾರ್ಗವಾಗಿ ಈ ರೈಲು ಚಲಿಸಲಿದ್ದು, ಬೆಂಗಳೂರಿನ ಜನತೆಗೆ ಸುಖಕರ ಹಾಗೂ ಸಂತಸದಾಯಕ ಪ್ರಯಾಣದ ವ್ಯವಸ್ಥೆ ದೊರೆತಂತಾಗಿದೆ.
ಇಂದು ಸಂಜೆ 4 ಗಂಟೆಗೆ ಮಾಗಡಿ ರಸ್ತೆಯ ಮೆಟ್ರೋ ನಿಲ್ದಾಣದಿಂದ ರೈಲು ಚಾಲನೆಗೆ ಕೇಂದ್ರ ಸಚಿವ ಎಂ.ವೆಂಕಯ್ಯನಾಯ್ಡು ಹಸಿರು ನಿಶಾನೆ ತೋರಿಸಲಿದ್ದಾರೆ. ಮೈಸೂರು ರಸ್ತೆ (ಟರ್ಮಿನಲ್) ನಲ್ಲಿ ಏರ್ಪಡಿಸಿರುವ ಸಭಾ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್, ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ, ಮೇಯರ್ ಮಂಜುನಾಥ ರೆಡ್ಡಿ ಮೊದಲಾದವರು ಪಾಲ್ಗೊಂಡಿದ್ದರು.