ಮನೋರಂಜನೆ

ಬಿಗ್ ಬಾಸ್ ಮನೆಗೆ ಮತ್ತೆ ವೆಂಕಟ್‌ಗೆ ಪ್ರವೇಶವಿಲ್ಲ- ಪರಮೇಶ್ವರ್ ಗುಂಡ್ಕಲ್

Pinterest LinkedIn Tumblr

huchಸೋಮವಾರ: ಬಿಗ್ ಬಾಸ್ ಮನೆಯಿಂದ ಹುಚ್ಚ ವೆಂಕಟ್ ಅವರ ಅಭಿಮಾನಿಗಳು ಫುಲ್ ಗರಂ ಆಗಿದ್ದಾರೆ. ಜೊತೆಗೆ ಹುಚ್ಚ ವೆಂಕಟ್ ಅವರು ಇಲ್ಲದೇ ನಮಗಿನ್ನು ಬಿಗ್ ಬಾಸ್ ಮನೆಯಲ್ಲಿ ಮನೋರಂಜನೆ ಸಿಗಲ್ಲ. ಹಾಗಾಗಿ ವೆಂಕಟ್ ಅವರನ್ನು ಮತ್ತೆ ಬಿಗ್ ಬಾಸ್ ಮನೆಗೆ ಕರೆ ತರಬೇಕು ಅನ್ನೋ ಒತ್ತಾಯಗಳು ಕೇಳಿ ಬರುತ್ತಿದ್ದವು. ಆದ್ರೆ ಹುಚ್ಚ ವೆಂಕಟ್ ಮತ್ತೆ ಮನೆಗೆ ಬರ್ತಾರಾ ಇಲ್ಲೋ ಎನ್ನೋ ಬಗ್ಗೆ ಎದ್ದಿದ್ದ ಎಲ್ಲಾ ಗೊಂದಲಗಳಿಗೆ ಇದೀಗ ಉತ್ತರ ಸಿಕ್ಕಿದೆ.

ಕಲರ್ಸ್ ಕನ್ನಡ ವಾಹಿನಿ ಬ್ಯುಸಿನೆಸ್ ಹೆಡ್ ಆಗಿರುವ ಪರಮೇಶ್ವರ್ ಗುಂಡ್ಕಲ್ ಅವರು ಯಾವುದೇ ಕಾರಣಕ್ಕೂ ವೆಂಕಟ್ ಅವರನ್ನು ಬಿಗ್ ಬಾಸ್ ಮನೆಗೆ ಮತ್ತೆ ಕರೆ ತರೋದಿಲ್ಲ ಅಂತಾ ಸ್ಪಷ್ಟ ಪಡಿಸಿದ್ದಾರೆ. ಅಲ್ಲದೇ ವೈಟ್ ಕಾರ್ಡ್ ಎಂಟ್ರಿಯಲ್ಲೂ ಹುಚ್ಚ ವೆಂಕಟ್ ಅವರಿಗೆ ಬಿಗ್ ಬಾಸ್ ಮನೆಗೆ ಎಂಟ್ರಿಗೆ ಅವಕಾಶವಿಲ್ಲ ಅಂತಾ ಹೇಳಿದ್ದಾರೆ. ಆ ಮೂಲಕ ವೆಂಕಟ್ ಬರುತ್ತಾರೆ ಅನ್ನೋ ನಿರೀಕ್ಷೆಯಲ್ಲಿದ್ದ ಅಭಿಮಾನಿಗಳ ಆಸೆಗೆ ತೆರೆ ಎಳೆದಂತಾಗಿದೆ.

ಸದ್ಯ ವೆಂಕಟ್ ಹೊರ ಬಿದ್ದ ಸುದ್ದಿ ಅವರ ಅಭಿಮಾನಿಗಳಿಗೆ ತೀವ್ರ ನಿರಾಸೆಯನ್ನು ಉಂಟು ಮಾಡಿದೆ. ಹುಚ್ಚ ವೆಂಕಟ್ ಅವರನ್ನು ಉದ್ದೇಶಪೂರ್ವಕವಾಗಿ ಮನೆಯಿಂದ ಹೊರ ಹಾಕಲಾಗಿದೆ ಅನ್ನೋ ಮಾತುಗಳು ಕೇಳಿ ಬರುತ್ತಿವೆ. ಆದ್ರೆ ಇದೀಗ ಅವರಿಗೆ ಬಿಗ್ ಬಾಸ್ ಮನೆಗೆ ಮತ್ತೆ ಪ್ರವೇಶವಿಲ್ಲ ಅನ್ನೋ ಸುದ್ದಿ ಅಭಿಮಾನಿಗಳಿಗೆ ಮತ್ತಷ್ಟು ನೋವನ್ನುಂಟು ಮಾಡಿದೆ.

Write A Comment