ಹಾಸನ: ನಗರದಲ್ಲಿ ಗುರುವಾರ ರಾತ್ರಿ ನಡೆದ ಘರ್ಷಣೆಗೆ ಸಂಬಂಧಿಸಿ 5 ಪ್ರಕರಣಗಳು ದಾಖಲಾಗಿದ್ದು, ಶುಕ್ರವಾರ ಶಾಂತಿ ನೆಲೆಸಿದೆ.
ಗಾಯಗೊಂಡ ಪೊಲೀಸ್ ಕಾನ್ಸ್ಟೆಬಲ್ ಮಹೇಶ್, ಆಟೊ ಚಾಲಕ ಫಯಾಜ್ ಅಲಿ, ಚೇತನ್, ಕಾರಿನಲ್ಲಿ ಹೋಗುತ್ತಿದ್ದ ಧವನಕುಮಾರ್ ಹಾಗೂ ವಜ್ರಕುಮಾರ್ ಒಳರೋಗಿಯಾಗಿ ಇಲ್ಲಿನ ಜಿಲ್ಲಾ ಸರ್ಕಾರಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಹಾಸನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಮಣ್ ಗುಪ್ತ ತರಬೇತಿಗೆ ತೆರಳಿರುವುದರಿಂದ ಬೆಂಗಳೂರಿನ ಪೊಲೀಸ್ ವರಿಷ್ಠಾಧಿಕಾರಿ ಕೌಶಲೇಂದ್ರಕುಮಾರ್, ಐಜಿಪಿ ಶರತ್ಚಂದ್ರ ಅವರು ಬಂದೋಬಸ್ತ್ಗೆ ಶುಕ್ರವಾರ ಆಗಮಿಸಿದ್ದಾರೆ. ಅವರು ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆಯುತ್ತಿರುವವರನ್ನು ಭೇಟಿಯಾದರು.
ಶ್ರೀರಾಮಸೇನ ಮುಖ್ಯಸ್ಥ ಪ್ರಮೋದ ಮುತಾಲಿಕ್ ಅವರನ್ನು ಗುರುವಾರ ರಾತ್ರಿ 11 ಗಂಟೆಗೆ ಹಾಸನದಿಂದ ಕಳುಹಿಸಿಕೊಡಲಾಗಿದೆ.