ಕರ್ನಾಟಕ

ಬಿಹಾರದಲ್ಲಿ ಬಿಜೆಪಿ ಸೋಲು ಮೋದಿ, ಅಮಿತ್ ಶಾ ವೈಯಕ್ತಿಕ ಸೋಲು: ಸಿದ್ದರಾಮಯ್ಯ

Pinterest LinkedIn Tumblr

sidduಬೆಂಗಳೂರು: ಮೋದಿಯ ಜನಪ್ರಿಯತೆ ತಗ್ಗುತ್ತಿದ್ದು, ಇದು ಮೋದಿ ಮತ್ತು ಅಮಿತ್ ಶಾ ಅವರ ಸ್ಪಷ್ಟ ಸೋಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಹಾರ ಚುನಾವಣೆ ಫಲಿತಾಂಶ ಕುರಿತು ವಿಶ್ಲೇಷಿಸಿದ್ದಾರೆ.  ಬಿಹಾರ ಚುನಾವಣೆ ಫಲಿತಾಂಶ ರಾಷ್ಟ್ರ ರಾಜಕಾರಣಕ್ಕೆ ದಿಕ್ಸೂಚಿ ಎಂದು ಸಿಎಂ ಪ್ರತಿಕ್ರಿಯಿಸಿದರು.

ಬಿಹಾರ ಚುನಾವಣೆ ಸೈದ್ಧಾಂತಿಕ ನಿಲುವಿನ ಮೇಲೆ ನಡೆದು ಕೋಮುವಾದಿ ಶಕ್ತಿಗಳನ್ನು ಬಿಹಾರದ ಜನತೆ ಸೋಲಿಸಿದರು ಎಂದು ಅಭಿಪ್ರಾಯಪಟ್ಟರು. ಇದು ಜಾತ್ಯತೀತ ಶಕ್ತಿಗಳು ಮತ್ತು ಸಾಮಾಜಿಕ ನ್ಯಾಯಕ್ಕೆ ಸಿಕ್ಕಿರುವ ಜಯ ಎಂದು ಸಿದ್ದರಾಮಯ್ಯ ಹೇಳಿದ್ದು, ನಾನು ನಿತೀಶ್ ಕುಮಾರ್, ಸೋನಿಯಾ ಗಾಂಧಿಯವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದಿದ್ದಾರೆ.

ನಿತೀಶ್ ಕುಮಾರ್ ಅವರ ಕ್ಲೀನ್ ಇಮೇಜ್, ಅವರು ಮಾಡಿದ ಅಭಿವೃದ್ಧಿ ಕಾರ್ಯಗಳನ್ನು ಮನಗಂಡು ಜನರು ಅವರಿಗೆ ವೋಟ್ ಮಾಡಿದ್ದಾರೆ. ಮೋದಿ ಕಳೆದ ಲೋಕಸಭೆ ಚುನಾವಣೆಗಳಲ್ಲಿ ನೀಡಿದ್ದ ಭರವಸೆಗಳು ಹುಸಿಯಾಗಿವೆ. ಇದರಿಂದ ಜನತೆಗೆ ಭ್ರಮನಿರಸನವಾಗಿದೆ ಎಂದು ಅಭಿಪ್ರಾಯಪಟ್ಟರು.

Write A Comment