ಕರ್ನಾಟಕ

ನಾದಿನಿ ಪ್ರೀತಿಸಿದ ಯುವಕನ ಕೊಲೆಗೈದ ಭಾವ

Pinterest LinkedIn Tumblr

Murder

ಬೆಂಗಳೂರು, ಸೆ.29: ನಾದಿನಿಯನ್ನು ಪ್ರೀತಿಸಿ ವಿವಾಹವಾಗಲು ಮುಂದಾಗಿದ್ದ ಯುವಕನೊಬ್ಬನನ್ನು ಭಾವ ಹಾಗೂ ಆತನ ಇಬ್ಬರು ಸ್ನೇಹಿತರು ಚಾಕುವಿನಿಂದ ಇರಿದು ಬರ್ಬರವಾಗಿ ಕೊಲೆ ಮಾಡಿರುವ ದುರ್ಘಟನೆ ನಿನ್ನೆ ರಾತ್ರಿ ಚಂದ್ರಲೇಔಟ್‍ನ ಗಂಗೊಂಡನಹಳ್ಳಿಯಲ್ಲಿ ನಡೆದಿದೆ.

ಗಂಗೊಂಡನಹಳ್ಳಿಯ ಸಿದ್ದಿಕ್(24)ಕೊಲೆಯಾದವರು,ರಾತ್ರಿ 10.30ರಲ್ಲಿ ಸಿದ್ದಿಕ್‍ನನ್ನು ಆತ ಪ್ರೀತಿಸುತ್ತಿದ್ದ ಯುವತಿಯ ಭಾವ ನದೀಂಖಾನ್ ಮೂವರೊಂದಿಗೆ ಸೇರಿ ಜಗಳ ತೆಗೆದು ಚಾಕುವಿನಿಂದ ಇರಿದು ಪರಾರಿಯಾಗಿದ್ದರು.

ಗಂಭೀರವಾಗಿ ಗಾಯಗೊಂಡಿರುವ ಸಿದ್ದಿಕ್‍ನನ್ನು ತಕ್ಷಣವೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಮಧ್ಯರಾತ್ರಿ ಮೃತಪಟ್ಟಿದ್ದಾನೆ.

ಕಿಲೆ ಪ್ರಕರಣ ದಾಖಲಿಸಿಕೊಂಡ ಚಂದ್ರ ಲೇಔಟ್ ಪೆÇಲೀಸರು ಆರೋಪಿಗಳಾದ ಸಾಧಿಕ್ ನದೀಂನನ್ನು ಬಂಧಿಸಿದ್ದಾರೆ. ನದೀಂ ಖಾನ್ ಮತ್ತು ಕೊಲೆಯಾದ ಸಿದ್ದಿüಕ್ ಸಂಬಂಧಿಕರು. ಈ ಇಬ್ಬರ ನಡುವೆ ಕಳೆದ ಕೆಲವು ವರ್ಷಗಳ ಹಿಂದೆ ಜಗಳವಾಗಿ ದ್ವೇಷವಿತ್ತು.. ನದೀಂ ಖಾನ್ ಪತ್ನಿಯ ತಂಗಿಯನ್ನು ಕೊಲೆಯಾದ ಸಿದ್ದಕ್ ಖಾನ್ ಪ್ರೀತಿಸುತ್ತಿದ್ದ.

ಇವರಿಬ್ಬರ ವಿವಾಹ ಕೂಡ ನಿಶ್ಚಯವಾಗಿತ್ತು ಆದರೆ ಈ ಮದುವೆಗೆ ನದೀಂನ ವಿರೋಧವಿತ್ತು. ಏನೇ ಆದರೂ ತನ್ನ ನಾದಿನಿಯನ್ನು ಸಿದ್ದಿಕ್‍ಗೆ ಮದುವೆ ಮಾಡಬಾರದು ಎಂದು ಅಡ್ಡಗಾಲು ಹಾಕಿದ್ದ.

ಇಷ್ಟಾದರೂ ಮದುವೆ ನಿಗದಿಯಾಗಿತ್ತು. ಇದರಿಂದ ರೊಚ್ಚಿಗೆದ್ದ ನದೀಂ ಖಾನ್ ನಿನ್ನೆ ರಾತ್ರಿ ಸಿದ್ದಿಕ್‍ನನ್ನು ಮೂವರು ಸ್ನೇಹಿತರ ಜೊತೆ ಸೇರಿ ಚಾಕುವಿನಿಂದ ಇರಿದು ಕೊಂದಿದ್ದಾನೆ.ಇನ್ನು ಕೆಲವೇ ದಿನಗಳಲ್ಲಿ ಮದುವೆಯಾಗುವ ಕನಸು ಕಟ್ಟಿಕೊಂಡಿದ್ದ ಸಿದ್ದಿüಕ್ ಹಳೆಯ ದ್ವೇಷಕ್ಕೆ ಬಲಿಯಾಗಿದ್ದಾನೆ.ಘಟನೆ ನಡೆಸ ಸ್ಥಳಕ್ಕೆ ಡಿಸಿಪಿ ಲಾಬೂರಾಮ್ ಅವರು ಬೇಟಿ ನೀಡಿ ಪರಿಶಿಲನೆ ನಡೆಸಿದ್ದಾರೆ.

Write A Comment