ಕಲಬುರ್ಗಿ: ನಗರದಲ್ಲಿ ಬುಧವಾರ ಬಂದ್ ವೇಳೆ ಯುವಕಯೊಬ್ಬ ಕರ್ನಾಟಕ ಪ್ರಾಂತ ರೈತಸಂಘದ ಅಧ್ಯಕ್ಷ ಮಾರುತಿ ಮಾನ್ಪಡೆ ಮೇಲೆ ಹಲ್ಲೆ ನಡೆಸಿದ್ದು, ಅವರ ಬಲಗೈಗೆ ಪೆಟ್ಟಾಗಿದೆ.
ಹೋಟೆಲ್ನಲ್ಲಿದ್ದ ಜಾಲರಿಸೌಟನ್ನು ತಲೆಯನ್ನು ಗುರಿಯಾಗಿಸಿಕೊಂಡು ಬೀಸಿದಾಗ ಮಾನ್ಪಡೆ ಕೈ ಅಡ್ಡ ಮಾಡಿದರು. ಆಗ ಅವರ ಬಲಗೈಗೆ ಪೆಟ್ಟಾಗಿ ರಕ್ತ ಬಂದಿತು. ಕೂಡಲೇ ಜಿಲ್ಲಾಸ್ಪತ್ರೆಗೆ ತೆರಳಿದರು. ಅಲ್ಲಿ ವೈದ್ಯರು ಎರಡು ಹೊಲಿಗೆ ಹಾಕಿದರು. ಚಿಕಿತ್ಸೆ ಪಡೆದು ಅವರು ಮತ್ತೆ ಮುಷ್ಕರದಲ್ಲಿ ಭಾಗವಹಿಸಿದರು.