ಕರ್ನಾಟಕ

ಕಾಂಗ್ರೆಸ್ ತೊರೆಯಲಿರುವ ನಂದನ್ ನೀಲೇಕಣಿ

Pinterest LinkedIn Tumblr

Nandan-Nilekaniಬೆಂಗಳೂರು: ಆಧಾರ್ ರೂವಾರಿ, ಇನ್ಫೋಸಿಸ್ ಸಹ ಸಂಸ್ಥಾಪಕ ನಂದನ್ ನೀಲೇಕಣಿ ಅವರು ಶೀಘ್ರದಲ್ಲೇ ಕಾಂಗ್ರೆಸ್ ತೊರೆಯಲಿದ್ದಾರೆ.

ದೇಶಾದ್ಯಂತ ‘ಏಕ್‌ಸ್ಟೆಪ್’ ಎಂಬ ಶೈಕ್ಷಣಿಕ ಅಭಿಯಾನದಲ್ಲಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಳ್ಳುವ ನಿಟ್ಟಿನಲ್ಲಿ ಅವರು ಈ ಕ್ರಮಕ್ಕೆ ಮುಂದಾಗಿದ್ದಾರೆ ಎಂದು ಮೂಲಗಳು ಸೋದರ ಪತ್ರಿಕೆ ಟೈಮ್ಸ್ ಆಫ್ ಇಂಡಿಯಾಕ್ಕೆ ತಿಳಿಸಿವೆ.

ಕಳೆದ ವರ್ಷದ ಲೋಕಸಭೆ ಚುನಾವಣೆಗಳಲ್ಲಿ ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಬಿಜೆಪಿಯ ಅನಂತ್ ಕುಮಾರ್ ವಿರುದ್ಧ ಸೆಣಸಲು ಕಾಂಗ್ರೆಸ್ ಸೇರ್ಪಡೆಯಾಗಿದ್ದ ನೀಲೇಕಣಿ, ಚುನಾವಣೆಯಲ್ಲಿ ಸೋಲಪ್ಪಿದ್ದರು. ಯುಪಿಎ ಸರಕಾರದ ಆಧಾರ್-2 ಯೋಜನೆಯ ನೇತೃತ್ವ ವಹಿಸಿ ಅವರು ಗಮನ ಸೆಳೆದಿದ್ದರು. ಚುನಾವಣೆಗಳಲ್ಲಿ ಸೋತ ಬಳಿಕ ಕಾಂಗ್ರೆಸ್ ಕೇಂದ್ರೀಯ ನಾಯಕತ್ವವಾಗಲೀ, ರಾಜ್ಯ ನಾಯಕತ್ವವಾಗಲಿ ಅವರಿಂದ ಯಾವುದೇ ಸೇವೆಯನ್ನೂ ಪಡೆದುಕೊಂಡಿರಲಿಲ್ಲ.

Write A Comment