ಕರ್ನಾಟಕ

30 ಸಾವಿರಕ್ಕೆ ಹೆಂಡತಿಯನ್ನು ಮಾರಿದ ದ್ರೋಹಿಯ ಬಂಧನ

Pinterest LinkedIn Tumblr

arrestಬೆಂಗಳೂರು, ಜೂ.26- ಪತ್ನಿಯನ್ನು ವೇಶ್ಯಾವಾಟಿಕೆಗೆ ಮಾರಿದ್ದ ವ್ಯಕ್ತಿ ಸೇರಿದಂತೆ  ಏಳು ಮಂದಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಸುಬ್ರಹ್ಮಣ್ಯಪುರ ಪೊಲೀಸ್ ಠಾಣಾ ವ್ಯಾಪ್ತಿಯ ಗಣಪತಿ ನಗರದ 2ನೇ ಮುಖ್ಯರಸ್ತೆಯಲ್ಲಿರುವ ಮನೆಯೊಂದರಲ್ಲಿ ಹುಡುಗಿಯರನ್ನಿಟ್ಟುಕೊಂಡು ವೇಶ್ಯಾವಾಟಿಕೆ ನಡೆಸಿರುವ

ಬಗ್ಗೆ ಸಿಸಿಬಿ ಪೊಲೀಸರಿಗೆ ಮಾಹಿತಿ ಲಭಿಸಿದೆ. ಈ  ಬಗ್ಗೆ ಕಾರ್ಯಾಚರಣೆ ಕೈಗೊಂಡು ಮನೆ ಮೇಲೆ ದಾಳಿ ಮಾಡಿ ಆರೋಪಿಗಳಾದ ನರಸಿಂಹ, ಕೃಷ್ಣ, ಸುರೇಶ್, ಕೃಷ್ಣ, ಸುನಿಲ್, ಶಿವಲಿಂಗಯ್ಯ, ಲಿಂಗರಾಜುನನ್ನು ಬಂಧಿಸಿದ್ದಾರೆ. ಆರೋಪಿ ನರಸಿಂಹ ಎಂಬಾತ ತನ್ನ ಪತ್ನಿಯನ್ನು ಕೃಷ್ಣ ಎಂಬಾತನಿಗೆ 30 ಸಾವಿರಕ್ಕೆ ಒಂದು ವರ್ಷದ ಹಿಂದೆ ಮಾರಾಟ ಮಾಡಿದ್ದು ತನಿಖೆಯಿಂದ ಗೊತ್ತಾಗಿದೆ.

ಪತ್ನಿಯನ್ನು ಬಲವಂತವಾಗಿ ವೇಶ್ಯಾವಾಟಿಕೆಯಲ್ಲಿ ತೊಡಗಿಸಿಕೊಂಡಿದ್ದರಿಂದ ಈಕೆಗೆ ಏಡ್ಸ್ ಎಂಬ ಖಾಯಿಲೆ ಬಂದಿದ್ದು, ಈಕೆಯೊಂದಿಗೆ ಲೈಂಗಿಕ ಸಂಪರ್ಕ ಹೊಂದಿದ್ದ ಅನೇಕರಿಗೆ ಈ ಖಾಯಿಲೆ ಬಂದಿರುವ ಸಾಧ್ಯತೆಗಳಿವೆ. ಬಂಧಿತರಾಗಿರುವ ಎಲ್ಲರೂ ವಿವಾಹಿತರಾಗಿದ್ದು, ಇವರು ಆರೋಪಿ ಕೃಷ್ಣನೊಂದಿಗೆ ಸಂಪರ್ಕದಲ್ಲಿದ್ದರು. ಆರೋಪಿ ಕೃಷ್ಣ ವೇಶ್ಯಾವಾಟಿಕೆ ದಂಧೆಯನ್ನು ನಿರಂತರವಾಗಿ ನಡೆಸುತ್ತಿದ್ದನೆಂದು ತಿಳಿದುಬಂದಿದೆ. ಆರೋಪಿಗಳಿಂದ 9 ಮೊಬೈಲ್, 1,100 ನಗದು ವಶಪಡಿಸಿಕೊಂಡಿದ್ದಾರೆ. ಆರೋಪಿಗಳ ವಿರುದ್ಧ ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Write A Comment