ಕರ್ನಾಟಕ

ನನಗೆ ಸಾವಿನ ಭಯ ಕಾಡುತ್ತಿದೆ ಅದಕ್ಕೂ ಮೊದಲು…: ಶಾಸಕ ರಮೇಶ್ ಕುಮಾರ್

Pinterest LinkedIn Tumblr

ra

ಕೋಲಾರ: ನನಗೆ ಸಾವಿನ ಭಯ ಕಾಡುತ್ತಿದ್ದು, ಸಾವನ್ನಪ್ಪುವುದರ ಒಳಗೆ ಕೋಲಾರ ಜನ ನೆನಪಿನಲ್ಲಿಡುವಂತಹ ಕಾರ್ಯವನ್ನು ಮಾಡಬೇಕಿದೆ. ಅಲ್ಲದೆ ಜನರಿಗೆ ಮಾರಕವಾಗುವಂತಹ ಯಾವುದೇ ಕಾನೂನನ್ನು ಜಾರಿಗೆ ತಂದಲ್ಲಿ ನಾನೇ ಖುದ್ದು ಸುಟ್ಟು ಹಾಕುತ್ತೇನೆ ಎಂದು ಜಿಲ್ಲೆಯ ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ರಮೇಶ್ ಕುಮಾರ್ ತಮ್ಮ ಅಭಿಪ್ರಾಯ ವ್ಯಕ್ತಿಪಡಿಸಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನನಗೆ ಸಾವಿನ ಭೀತಿ ಕಾಡುತ್ತಿದೆ. ಯಾವಾಗ ಸಾಯುತ್ತೇನೆ ಎಂದು ತಿಳಿದಿಲ್ಲ. ಆದರೆ ಸಾಯುವ ಮೊದಲು ಕೋಲಾರ ಜನ ನೆನಪಿಸಿಕೊಳ್ಳುವಂತಹ ಉತ್ತಮ ಕಾರ್ಯವನ್ನು ಮಾಡಬೇಕೆಂಬುದು ನನ್ನ ಬಯಕೆ. ಆದ್ದರಿಂದ ಯಾವುದಾದರೂ ಮೂಲದಿಂದ ಜಿಲ್ಲೆಗೆ ನೀರು ತರಲು ನಾನು ಶ್ರಮಿಸುತ್ತೇನೆ ಎಂದರು.

ಇದೇ ವೇಳೆ, ಜಿಲ್ಲೆಯಲ್ಲಿ ನೀಲಗಿರಿ ಬೆಳೆಯನ್ನು ಬುಡ ಸಮೇತ ಕಿತ್ತೊಗೆಯುವ ಕಾರ್ಯ ಆಗಬೇಕಿದೆ. ಅದಕ್ಕೆ ನೂತನ ಕಾನೂನು ಅಗತ್ಯವಿಲ್ಲ. ಈ ಹಿನ್ನೆಲೆಯಲ್ಲಿ ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕು. ಅಲ್ಲದೆ ಇನ್ನು ಮುಂದೆ ನಮ್ಮ ಜಿಲ್ಲೆಯಲ್ಲಿ ನೀಲಗಿರಿ ಸಸ್ಯದ ಒಂದೇ ಒಂದು ಬೇರನ್ನೂ ಕೂಡ ನಾಟಿ ಮಾಡಲು ಬಿಡುವುದಿಲ್ಲ. ಜನರನ್ನು ಸೇರಿಸಿಕೊಂಡು ಈ ಯತ್ನಕ್ಕೆ ಕೈ ಹಾಕುತ್ತೇನೆ. ಆದರೆ ಜನರಿಗೆ ಮಾರಕವಾಗುವಂತಹ ಕಾನೂನನ್ನೇನಾದರೂ ಜಾರಿಗೊಳಿಸಿದಲ್ಲಿ ಅಂತಹ ಕಾನೂನುಗಳನ್ನು ಸುಟ್ಟು ಹಾಕುತ್ತೇನೆ ಎಂದು ಆಕ್ರೋಶಭರಿತರಾಗಿ ನುಡಿದರು.

ಇನ್ನು ಸಾವಿನ ಬಗ್ಗೆ ಮಾತನಾಡಿರುವ ಅವರ ಹೇಳಿಕೆಗಳು ಸಾರ್ವಜನಿಕರಲ್ಲಿ ಹಲವು ಅನುಮಾನಗಳನ್ನು ಹುಟ್ಟು ಹಾಕುತ್ತಿದ್ದು, ಅವರಿಗೆ ಏನಾದರೂ ಜೀವ ಬೆದರಿಕೆ ಬಂದಿದೆಯೇ ಅಥವಾ ಆರೋಗ್ಯದ ಸಮಸ್ಯೆಯಿಂದ ಬಳಲುತ್ತಿದ್ದಾರೆಯೇ ಎಂಬ ಗೊಂದಲಗಳನ್ನು ಸೃಷ್ಟಿಸಿವೆ.

Write A Comment