ಕರ್ನಾಟಕ

ವಿಧಾನಸಭೆ ಉಪಸಭಾಧ್ಯಕ್ಷ ಶಿವಶಂಕರರೆಡ್ಡಿ ಮೇಲೆ ಚಪ್ಪಲಿ ಎಸೆತ; ಸಾರ್ವಜನಿಕರಿಂದ ಹಿಗ್ಗಾಮುಗ್ಗ ಥಳಿತ

Pinterest LinkedIn Tumblr

Shivashankar-Reddy

ಗೌರಿಬಿದನೂರು, ಜೂ.21: ಕೃಷಿ ಆಂದೋಲನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ವಾಪಸ್ಸಾಗುತ್ತಿದ್ದ ವೇಳೆ ವ್ಯಕ್ತಿಯೋರ್ವ ವಿಧಾನಸಭೆಯ ಉಪಸಭಾಧ್ಯಕ್ಷ ಎನ್.ಎಚ್. ಶಿವಶಂಕರರೆಡ್ಡಿ ಅವರ ಮೇಲೆ ಚಪ್ಪಲಿ ಎಸೆದ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ವಿಧುರಾಶ್ವತ ಗ್ರಾಮದಲ್ಲಿ ನಡೆದಿದೆ.

ಶಿವಶಂಕರ ರೆಡ್ಡಿ ಅವರು ಕಾರ್ಯಕ್ರಮ ಮುಗಿಸಿಕೊಂಡು ವಾಪಸ್ಸಾಗುವ ವೇಳೆ ದಿಢೀರನೆ ಪ್ರತ್ಯಕ್ಷನಾದ ವ್ಯಕ್ತಿ ಚಪ್ಪಲಿಯನ್ನು ಎಸೆದ. ದುರ್ದೈವವಶಾತ್ ಚಪ್ಪಲಿ ಅವರಿಗೆ ತಾಗದೆ ಅವರ ಗನ್‌ಮ್ಯಾನ್‌ಗೆ ತಗುಲಿತು. ಆಲಗನಹಳ್ಳಿ ಗ್ರಾಮದ ಕಸಬಾ ಹೋಬಳಿಯ ಜಯರಾಂ ರೆಡ್ಡಿ (55) ಎಂಬುವನೇ ಚಪ್ಪಲಿ ಎಸೆದ ವ್ಯಕ್ತಿಯಾಗಿದ್ದಾನೆ. ಘಟನೆ ನಡೆದ ತಕ್ಷಣ ಸಾರ್ವಜನಿಕರು ಜಯರಾಂರೆಡ್ಡಿ ಯನ್ನು ಹಿಗ್ಗಾಮುಗ್ಗ ಥಳಿಸಿ, ಪೊಲೀಸರಿಗೆ ಒಪ್ಪಿಸಿದರು.

Write A Comment