ಕರ್ನಾಟಕ

ಮಗನನ್ನು ಥಳಿಸಿದ ಪತಿ ವಿರುದ್ಧ ಪತ್ನಿ ದೂರು..!

Pinterest LinkedIn Tumblr

beat

ಮೈಸೂರು, ಜೂ.8: ಮಗನಿಗೆ ಹೊಡೆದ ತಂದೆಯ ವಿರುದ್ಧ ತಾಯಿ ಯೇದೂರು ನೀಡಿರುವ ವಿಚಿತ್ರ ಘಟನೆ ನಜರ್ ಬಾದ್ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ.

ಮೈಸೂರಿನ ಗಾಯಿತ್ರಿಪುರಂ ನಿವಾಸಿ ಹಾಗೂ ಶಿರಾದಲ್ಲಿ ಎಂಜಿನಿಯರ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಯಾದವ್ ಕುಮಾರ್ ಅವರ ವಿರುದ್ಧವೇ ಇಂತಹದೊಂದು ದೂರು ದಾಖಲಾಗಿದೆ.

ಅಲ್ಲದೆ, ಯಾದವ್ ಕುಮಾರ್ ಪತ್ನಿ ಲಕ್ಷ್ಮಿ ಎಂಬುವರೇ ತನ್ನ ಗಂಡ ಕ್ಷುಲ್ಲಕ ಕಾರಣಕ್ಕೆ ನಾಲ್ಕನೇ ತರಗತಿ ಓದುತ್ತಿರುವ ತಮ್ಮ ಮಗನಿಗೆ ಹ್ಯಾಂಗರ್‌ನಿಂದ ಹೊಡೆದಿದ್ದಾರೆ ಎಂದು ಆರೋಪಿಸಿ ದೂರು ನೀಡಿದ್ದಾರೆ.

ಈ ಸಂಬಂಧ ಅಪ್ರಾಪ್ತ ಬಾಲಕನಿಗೆ ಹಲ್ಲೆ ನಡೆಸಿರುವ ಆರೋಪದಡಿ ದೂರು ದಾಖಲಿಸಿಕೊಂಡಿರುವ ನಜರ್ ಬಾದ್ ಠಾಣೆಯ ಪೊಲೀಸರು ಆರೋಪಿಯನ್ನು ವಿಚಾರಣೆಗೆ ಒಳಪಡಿಸಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ.

Write A Comment