ಕರ್ನಾಟಕ

ಭುಜಂಗ ಚಿತ್ರದ ಚಿತ್ರೀಕರಣ ವೇಳೆ ಗಾಯ; ಸಾರ್ವಜನಿಕವಾಗಿ ಕಣ್ಣೀರಿಟ್ಟ ಹಾಸ್ಯ ನಟ ಬುಲೆಟ್ ಪ್ರಕಾಶ್

Pinterest LinkedIn Tumblr

prakash

ಬೆಂಗಳೂರು: ಭುಜಂಗ ಚಿತ್ರದ ಸಾಹಸ ದೃಶ್ಯದ ಚಿತ್ರೀಕರಣ ವೇಳೆ ಗಾಯಗೊಂಡಿದ್ದ ಹಾಸ್ಯ ನಟ ಬುಲೆಟ್ ಪ್ರಕಾಶ್ ಅವರು ಇಂದು ಪ್ರತಿಕ್ರಿಯೆ ನೀಡಿದ್ದು, ಹಿಂದಿನ ಘಟನೆಗಳನ್ನು ನೆನೆದು ಬುಧವಾರ ಸಾರ್ವಜನಿಕವಾಗಿ ಕಣ್ಣೀರಿಟ್ಟಿದ್ದಾರೆ.

ಘಟನೆ ಕುರಿತಂತೆ ಸುದ್ಧಿಗೋಷ್ಟಿಯಲ್ಲಿ ಮಾತನಾಡಿರುವ ಅವರು, ಭುಜಂಗ ಚಿತ್ರದ ಚಿತ್ರೀಕರಣದ ವೇಳೆ ನನಗೆ ಏನೂ ಆಗಲಿಲ್ಲ. ತಾಯಿ ಚಾಮುಂಡೇಶ್ವರಿ ಕೃಪೆಯಿಂದ ಅಪಾಯದಿಂದ ಪಾರಾಗಿದ್ದೇನೆ. ಸಿನಿಮಾ ಚಿತ್ರಿಕರಣದಲ್ಲಿ ಇಂತಹ ಘಟನೆಗಳು ಸಾಮಾನ್ಯವಾಗಿರುತ್ತದೆ. ಈ ಹಿಂದೆಯೂ ನಾನು ಅಪಘಾತಕ್ಕೀಡಾಗಿದ್ದೆ. ಆ ವೇಳೆ ನಾನು ಸಾವನ್ನಪ್ಪಿದ್ದೇನೆ ಎಂದು ಮಾಧ್ಯಮಗಳು ವರದಿ ಮಾಡಿದ್ದವು ಎಂದು ಹಿಂದೆ ನಡೆದ ಘಟನೆಗಳನ್ನು ನೆನೆದು ಬುಲೆಟ್ ಪ್ರಕಾಶ್ ಕಣ್ಣೀರು ಹಾಕಿದ್ದಾರೆ.

ಭುಜಂಗ ಚಿತ್ರದ ಸಾಹಸ ದೃಶ್ಯದ ಚಿತ್ರೀಕರಣವನ್ನು ಮೈಸೂರಿನ ವರುಣದಲ್ಲಿ ಸೆರೆ ಹಿಡಿಯಲಾಗುತ್ತಿತ್ತು. ಹಗ್ಗ ಕಟ್ಟಿದ ಬೈಕ್ ಮೇಲೆ ಪ್ರಜ್ವಲ್ ದೇವರಾಜ್ ಹಾಗೂ ಬುಲೆಟ್ ಪ್ರಕಾಶ್ ಕುಳಿತಿದ್ದರು. ಈ ವೇಳೆ ಬೈಕ್ ಗೆ ಕಟ್ಟಿದ ಹಗ್ಗವು ತುಂಡಾಗಿದೆ. ಪರಿಣಾಮ ಆಯತಪ್ಪಿ ಕೆಳಗೆ ಬೀಳುತ್ತಿದ್ದ ಬುಲೆಟ್ ಪ್ರಕಾಶ್ ಅವರನ್ನು ಸಿಬ್ಬಂದಿಗಳು ನೋಡಿ, ತಕ್ಷಣ ರಕ್ಷಣೆಗೆ ಧಾವಿಸಿ ಅಪಾಯಕ್ಕೆ ಸಿಲುಕುತ್ತಿದ್ದ ಬುಲೆಟ್ ಪ್ರಕಾಶ್ ಅವರನ್ನು ರಕ್ಷಿಸಿದ್ದರು.

Write A Comment