ಕರ್ನಾಟಕ

ರಾಯಚೂರಿನಲ್ಲಿ ಅಂತರ್ಜಾತೀಯ ಮದುವೆಯೇ ಯುವಕನ ಬಲಿ ಪಡೆಯಿತು

Pinterest LinkedIn Tumblr

465murder

ಬೇರೆ ಜಾತಿಯ ಹುಡುಗಿಯನ್ನು ಪ್ರೀತಿಸಿ ಮದುವೆಯಾದ ಎಂಬ ಕಾರಣಕ್ಕೆ ಯುವಕನನ್ನು ಬರ್ಬರವಾಗಿ ಹತ್ಯೆಗೈದ ಅಮಾನವೀಯ ಘಟನೆ ರಾಯಚೂರಿನಲ್ಲಿ ನಡೆದಿದೆ.

2014ರಲ್ಲಿ ಬಸವರಾಜೇಶ್ವರಿ ಎಂಬ ಹುಡುಗಿಯನ್ನು ಆನಂದ ಸಾಗರ್‌ ಎಂಬ ಯುವಕ ಪ್ರೀತಿಸಿ ಮದುವೆಯಾಗಿದ್ದ. ಇದೇ ಕಾರಣಕ್ಕೆ ಈ ಎರಡೂ ಕುಟುಂಬಗಳ ನಡುವೆ ವೈಮನಸ್ಸುಂಟಾಗಿತ್ತು. ಆರ್ಯ ಸಮಾಜದಲ್ಲಿ ಈ ಜೋಡಿ ಸರಳ ವಿವಾಹವಾಗಿತ್ತಲ್ಲದೇ ಮದುವೆ ರಿಜಿಸ್ಟ್ರಾರ್ ಕೂಡಾ ಆಗಿತ್ತು. ಅಲ್ಲದೇ ದಂಪತಿ ಮದುವೆಯಾದ ನಂತರ ಬಳ್ಳಾರಿಯಲ್ಲಿ ನೆಲೆಸಿದ್ದರು.

ಭಾನುವಾರ ರಾತ್ರಿ ಗೆಳೆಯರ ಆಹ್ವಾನದ ಮೇಲೆ ಊರಿಗೆ ಬಂದಿದ್ದ ಆನಂದ ಸಾಗರ್‌ ನನ್ನು ರಾಯಚೂರಿನ ಹೊರವಲಯದಲ್ಲಿ ಕಲ್ಲಿನಿಂದ ಜಜ್ಜಿ ಕೊಲೆಮಾಡಲಾಗಿದ್ದು ತಕ್ಷಣ ಬಂದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಕೊಲೆಗಾರರ ಪತ್ತೆಗೆ ಮುಂದಾಗಿದ್ದಾರೆ ಎಂಬ ಮಾಹಿತಿ ಲಭಿಸಿದೆ.

Write A Comment