ಬೆಂಗಳೂರು: ಅಪಘಾತ ನಡೆದ ಸ್ಥಳಕ್ಕೆ ಶೀಘ್ರವಾಗಿ ತಲುಪಿ, ಗಾಯಾಳುಗಳಿಗೆ ಪ್ರಥಮ ಚಿಕಿತ್ಸೆ ನೀಡಲು ಅನುಕೂಲವಾಗುವಂತೆ ಹೆಣ್ಣೂರು ಕ್ರಾಸ್ನ ಕ್ರಿಸ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ರೂಪಿಸಿರುವ ಎರಡು ‘ಬೈಕ್ ಅಂಬುಲೆನ್ಸ್’ಗಳಿಗೆ ರಾಜ್ಯ ಪೊಲೀಸ್ ಮಹಾನಿರ್ದೇಶಕ ಲಾಲ್ ರೋಕುಮ ಪಚಾವೊ ಅವರು ಶನಿವಾರ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, ‘ಸಂಚಾರ ಸಮಸ್ಯೆ ಇರುವ ನಗರಗಳಲ್ಲಿ ಇಂತಹ ಅಂಬುಲೆನ್ಸ್ಗಳ ಸೇವೆ ಅಗತ್ಯವಿದೆ. ವಿದೇಶಗಳಲ್ಲಿ ಜನಪ್ರಿಯವಾದ ಈ ವ್ಯವಸ್ಥೆಯನ್ನು ನಗರಕ್ಕೆ ಪರಿಚಯಿಸಿರುವ ಆಸ್ಪತ್ರೆಯ ಕಾರ್ಯ ಶ್ಲಾಘನೀಯ’ ಎಂದು ಅಭಿಪ್ರಾಯಪಟ್ಟರು.
‘ಈ ಅಂಬುಲೆನ್ಸ್ಗಳಲ್ಲಿ ಅಪಘಾತದ ಗಾಯಾಳುಗಳಿಗೆ ಅಗತ್ಯವಾದ ಜೀವರಕ್ಷಕ ಔಷಧಿಗಳು, ಚಿಕಿತ್ಸೆ ಉಪಕರಣಗಳು, ಆಮ್ಲಜನಕದ ಸಿಲಿಂಡರ್ಗಳು ಸೇರಿದಂತೆ ಅನೇಕ ಸಾಧನಗಳು ಇರುತ್ತವೆ.ಈ ಅಂಬುಲೆನ್ಸ್ ಸೇವೆಗಾಗಿ 080 4558 5558 ಸಂಖ್ಯೆಗೆ ಕರೆ ಮಾಡಬಹುದು.