ಕರ್ನಾಟಕ

ಬೈಕ್‌ ಅಂಬುಲೆನ್ಸ್‌ಗೆ ಚಾಲನೆ

Pinterest LinkedIn Tumblr

baik

ಬೆಂಗಳೂರು: ಅಪಘಾತ ನಡೆದ ಸ್ಥಳಕ್ಕೆ ಶೀಘ್ರವಾಗಿ ತಲುಪಿ, ಗಾಯಾಳುಗಳಿಗೆ ಪ್ರಥಮ ಚಿಕಿತ್ಸೆ ನೀಡಲು ಅನುಕೂಲ­ವಾಗುವಂತೆ ಹೆಣ್ಣೂರು ಕ್ರಾಸ್‌ನ ಕ್ರಿಸ್‌ ಸೂಪರ್‌ ಸ್ಪೆಷಾಲಿಟಿ  ಆಸ್ಪತ್ರೆ ರೂಪಿಸಿ­ರುವ ಎರಡು ‘ಬೈಕ್‌ ಅಂಬು­ಲೆನ್ಸ್‌’ಗಳಿಗೆ ರಾಜ್ಯ ಪೊಲೀಸ್ ಮಹಾ­ನಿರ್ದೇ­ಶಕ ಲಾಲ್ ರೋಕುಮ ಪಚಾವೊ ಅವರು ಶನಿವಾರ ಚಾಲನೆ ನೀಡಿದರು.

ನಂತರ ಮಾತನಾಡಿದ ಅವರು, ‘ಸಂಚಾರ ಸಮಸ್ಯೆ ಇರುವ ನಗರಗಳಲ್ಲಿ ಇಂತಹ ಅಂಬುಲೆನ್ಸ್‌ಗಳ ಸೇವೆ ಅಗತ್ಯವಿದೆ. ವಿದೇಶಗಳಲ್ಲಿ ಜನಪ್ರಿಯ­ವಾದ ಈ ವ್ಯವಸ್ಥೆಯನ್ನು ನಗರಕ್ಕೆ ಪರಿ­ಚಯಿಸಿ­ರುವ ಆಸ್ಪತ್ರೆಯ ಕಾರ್ಯ ಶ್ಲಾಘನೀಯ’ ಎಂದು ಅಭಿಪ್ರಾಯ­ಪಟ್ಟರು.

‘ಈ ಅಂಬುಲೆನ್ಸ್‌ಗಳಲ್ಲಿ ಅಪ­­ಘಾತ­ದ­ ಗಾಯಾಳುಗಳಿಗೆ ಅಗತ್ಯವಾದ ಜೀವ­ರಕ್ಷಕ ಔಷಧಿಗಳು, ಚಿಕಿತ್ಸೆ ಉಪಕ­ರಣ­ಗಳು, ಆಮ್ಲಜನಕದ ಸಿಲಿಂಡರ್‌­ಗಳು ಸೇರಿದಂತೆ ಅನೇಕ ಸಾಧನಗಳು ಇರುತ್ತವೆ.ಈ ಅಂಬುಲೆನ್ಸ್‌ ಸೇವೆಗಾಗಿ 080 4558 5558 ಸಂಖ್ಯೆಗೆ ಕರೆ ಮಾಡಬಹುದು.

Write A Comment