ಕರ್ನಾಟಕ

ಅಬಕಾರಿ ರಕ್ಷಕರ ನಿರ್ಗಮನ ಪಥ­ಸಂಚಲನ ಕಾರ್ಯಕ್ರಮ; ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಪೂರೈಸಲು ಅಬಕಾರಿ ಸಚಿವ ಸತೀಶ್‌ ಜಾರಕಿಹೊಳಿ ಸಲಹೆ

Pinterest LinkedIn Tumblr

parade

ಯಲಹಂಕ: ‘ಇತರೆ ಪೊಲೀಸರಂತೆ ಅಬಕಾರಿ ಇಲಾಖೆಯ ಪೊಲೀಸರಿಗೂ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಪೂರೈಸಿ, ಅಗತ್ಯ ತರಬೇತಿ ನೀಡಿದರೆ ಅವರೂ ಸಹ ಉತ್ತಮವಾಗಿ ಕಾರ್ಯನಿರ್ವ­ಹಿಸಲು ಸಾಧ್ಯವಾಗುತ್ತದೆ’ ಎಂದು ಅಬಕಾರಿ ಸಚಿವ ಸತೀಶ್‌ ಜಾರಕಿಹೊಳಿ ಹೇಳಿದರು.

ಇಲ್ಲಿನ ಸಶಸ್ತ್ರ ಪೊಲೀಸ್‌ ತರಬೇತಿ ಶಾಲೆಯಲ್ಲಿ ತರಬೇತಿ ಪೂರೈಸಿದ ಮೊದ­ಲನೇ ತಂಡದ ಅಬಕಾರಿ ರಕ್ಷಕರ ನಿರ್ಗಮನ ಪಥಸಂಚಲನ ಕಾರ್ಯ­ಕ್ರಮ­ದಲ್ಲಿ ಪಾಲ್ಗೊಂಡು ಮಾತನಾ­ಡಿದ ಅವರು, ‘ಅಬಕಾರಿ ಇಲಾಖೆಯು ರಾಜ್ಯದ ಆರ್ಥಿಕ ವ್ಯವಸ್ಥೆಯಲ್ಲಿ ಮಹ­ತ್ತರ ಪಾತ್ರ ವಹಿಸುತ್ತಿದ್ದು, ಅಧಿಕಾರಿ­ಗಳು ನಿಷ್ಠೆಯಿಂದ ಕಾರ್ಯನಿರ್ವಹಿಸ­ಬೇಕು’ ಎಂದರು.

‘ಸದ್ಯದ ಪರಿಸ್ಥಿತಿಯಲ್ಲಿ ಹೊಸ ಬಾರ್‌ಗಳಿಗೆ ಪರವಾನಗಿ ನೀಡಲಾ­ಗುವುದಿಲ್ಲ. ಶಾಲಾ–ಕಾಲೇಜು, ಸಾರ್ವ­ಜನಿಕ ಹಾಗೂ ವಸತಿ ಪ್ರದೇಶಗಳಲ್ಲಿ ಕಾರ್ಯ­ನಿರ್ವಹಿಸುತ್ತಿರುವ ಬಾರ್‌­ಗಳಿಗೆ ಈಗಾ­ಗಲೇ ನೋಟಿಸ್‌ ಜಾರಿ ಗೊಳಿ­ಸ­ಲಾಗಿದ್ದು, ಕಟ್ಟುನಿಟ್ಟಿನ ಕ್ರಮ ಕೈಗೊಳ್ಳ­ಲಾಗುವುದು’ ಎಂದರು.

ತರಬೇತಿ ಪೂರೈಸಿದ ಕರ್ನಾಟಕ ರಾಜ್ಯ ಕೈಗಾರಿಕಾ ಭದ್ರತಾ ಪಡೆಯ 133 ಪ್ರೊಬೆಷನರಿ ಪಿಎಸ್‌ಐಗಳನ್ನು ವಿವಿಧ ಸ್ಥಳಗಳಿಗೆ ನಿಯೋಜನೆ ಮಾಡ­ಲಾಯಿತು. ಇದೇ ಸಂದರ್ಭದಲ್ಲಿ ತರಬೇತಿ ಅವಧಿಯಲ್ಲಿ ವಿವಿಧ ಕ್ರೀಡೆ­ಗಳಲ್ಲಿ ವಿಜೇತರಾದ ಪ್ರಶಿಕ್ಷಣಾರ್ಥಿ­ಗಳಿಗೆ ಬಹುಮಾನ ವಿತರಿಸಲಾಯಿತು.

Write A Comment