ಕರ್ನಾಟಕ

ಕಾಡೇನ­ಹಳ್ಳಿಯ ದಲಿತರಿಂದ ದೇಗುಲ ಪ್ರವೇಶ

Pinterest LinkedIn Tumblr

degula

ಮುಳಬಾಗಲು: ತಲೆಮಾರುಗಳಿಂದ ಹೊರಗೆ ನಿಂತು ಪೂಜೆ ಸಲ್ಲಿಸುತ್ತಿದ್ದ, ದೂರವೇ ಉಳಿ­ಯುತ್ತಿದ್ದ ತಾಲ್ಲೂಕಿನ ಕಾಡೇನ­ಹಳ್ಳಿಯ ದಲಿತರಿಗೆ ಭಾನುವಾರ ವಿಶೇಷ ದಿನವಾ­ಗಿತ್ತು. ಏಕೆಂದರೆ, ಅವರು ಗ್ರಾಮದ ಸಪ್ತ­ಮಾತೃಕೆ ಚೌಡೇಶ್ವರಿ ಮತ್ತು ಸೋಮೇಶ್ವರ ದೇಗುಲದ ಒಳಕ್ಕೆ ಬಂದಿದ್ದರು.

ಇದುವರೆಗೂ ಒಳಕ್ಕೆ ಬಾ ಎನ್ನದ, ಬರ­ಬೇಡ ಎನ್ನದ ಅರ್ಚಕರು ಎಲ್ಲರಿಗೂ ನೀಡಿ­ದಂತೆ ಮಂಗಳಾರತಿ ತಟ್ಟೆಯನ್ನು ಅವರ ಮುಂದಕ್ಕೂ ತಂದಿದ್ದರು. ಮಂಗ­ಳಾರತಿಗೆ ಕೈ ಮುಗಿದ ದಲಿತರು ಚೌಡೇಶ್ವರಿ, ಸೋಮೇಶ್ವರ ದೇವರ ಮೂರ್ತಿ­ಯನ್ನು ಹತ್ತಿರದಿಂದ ನೋಡಿ ಕಣ್ಣು ತುಂಬಿಕೊಂಡು  ಕೈಮುಗಿ­ದರು. ಕಾಡೇನ­ಹಳ್ಳಿಯಷ್ಟೇ ಅಲ್ಲದೆ ಸಮೀ­ಪದ ಪೆದ್ದೂರು, ಚಿಕ್ಕ ನಗವಾರ ಗ್ರಾಮ­ಗಳ ದಲಿತರೂ ದೇಗುಲ­ು ಪ್ರವೇಶಿಸಿದ್ದರು.

ಜಿಲ್ಲಾ ಕೇಂದ್ರದಿಂದ ಸುಮಾರು 45 ಕಿ.ಮೀ. ದೂರ­ದ ಗ್ರಾಮ­ವೊಂದ­ರಲ್ಲಿ ಇಂಥ ಅಪರೂಪದ ಘಟನೆಗೆ ಕಾರ­ಣ­ವಾಗಿದ್ದು ದಲಿತರ ಗೃಹಪ್ರವೇಶ ರಾಜ್ಯ ಸಮಿತಿ. ಸಮಿತಿ ನೇತೃತ್ವವನ್ನು ವಹಿಸಿ­ರುವ, ಮುಳ­ಬಾಗಲು ನಿವಾಸಿ, ಕೋಲಾ­ರದ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಇತಿಹಾಸ ವಿಭಾಗದ ಸಹಾ­ಯಕ ಪ್ರಾಧ್ಯಾಪಕ ಡಾ.ಜಿ.ಶಿವಪ್ಪ ತಮ್ಮ ತಾಯಿಯ ತವರು ಮನೆ ಮತ್ತು ಪತ್ನಿಯ ಮನೆ ಇರುವ ಕಾಡೇನ­ಹಳ್ಳಿಯಲ್ಲಿ ಹೀಗೆ ವಿಶೇಷ ಕಾರ್ಯಕ್ರಮ ಏರ್ಪಡಿಸಿದ್ದರು.

ಅವರಿಗೆ ಜಿಲ್ಲಾಡಳಿತದ ಸಂಪೂರ್ಣ ಬೆಂಬಲ ಸೂಚಿಸಿ ಜಿಲ್ಲಾಧಿಕಾರಿ ಡಾ.ಕೆ.ವಿ.­ತ್ರಿಲೋಕಚಂದ್ರ ಅವರು ಪಾಲ್ಗೊಂಡರೆ, ಕಾಡೇನಹಳ್ಳಿಯ ಸಮೀಪದ ಹೆಬ್ಬಣಿ ಗ್ರಾಮದವರಾದ ಹೈಕೋರ್ಟ್ ನಿವೃತ್ತ ನ್ಯಾ.ಎಚ್‌.ಎನ್‌.­ನಾಗ­ಮೋಹನ ದಾಸ್‌, ಬೈರಕೂರು ಗ್ರಾಮದವರೇ ಆಗಿರುವ ರಾಜ್ಯ ಮುಖ್ಯ ಚುನಾವಣಾಧಿಕಾರಿ ಪಿ.ಎನ್.ಶ್ರೀನಿವಾಸಾ­ಚಾರಿ ಪಾಲ್ಗೊಂಡು ಕಾರ್ಯಕ್ರಮದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು. ಇವರಿಬ್ಬರೂ ಆಗಸ್ಟ್ 15ರಂದು ಎಂ.ಗೊಲ್ಲಹಳ್ಳಿಯಲ್ಲಿ ನಡೆ­ದಿದ್ದ ದಲಿತರ ಗೃಹಪ್ರವೇಶ ಕಾರ್ಯ­ಕ್ರಮದಲ್ಲೂ ಪಾಲ್ಗೊಂಡು ಗಮನ ಸೆಳೆದಿದ್ದರು.

ರಾಷ್ಟ್ರದೆಲ್ಲೆಡೆ ಹಬ್ಬಲಿ: ದೇಗುಲ ಪ್ರವೇಶದ ಬಳಿಕ ನಡೆದ ಕಾರ್ಯಕ್ರಮ­ದಲ್ಲಿ ಉಪನ್ಯಾಸ ನೀಡಿದ ನಾಗಮೋಹನ ದಾಸ್‌, ಮೇಲ್ಜಾತಿ­ಯವರ ಮನೆಗಳಿಗೆ ದಲಿತರನ್ನು ಕರೆ­ದೊಯ್ಯುವ ಗೃಹಪ್ರವೇಶ ಕಾರ್ಯಕ್ರಮ ಎರಡನೇ ಹಂತವನ್ನು ಮುಟ್ಟಿದೆ.

ಈಗ ದಲಿತರನ್ನು ದೇಗುಲಗಳಿಗೂ ಕರೆ-ದೊ­ಯ್ಯುವ ಪ್ರಯತ್ನ ಆರಂಭವಾಗಿ-ರು-ವುದು ಶ್ಲಾಘನೀಯ. ಇದು ಮೊದಲಿಗೆ ಇಡೀ ರಾಜ್ಯಕ್ಕೆ, ನಂತರ ರಾಷ್ಟ್ರದೆಲ್ಲೆಡೆ ಹಬ್ಬಲಿ ಎಂದು ಆಶಿಸಿದರು.

ಜಾಗೃತಿ ಯತ್ನ: ಜಿಲ್ಲೆಯ ಎಲ್ಲ ಮುಜ-ರಾಯಿ ದೇಗುಲ­ಗಳಿಗೂ ದಲಿತರನ್ನು ಕರೆ-ತರುವ ಕಾರ್ಯಕ್ರಮದ ಕುರಿತು ಜಾಗೃತಿ ಮೂಡಿಸಲು ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು ಎಂದು ಜಿಲ್ಲಾಧಿ-ಕಾರಿ ಡಾ.ತ್ರಿಲೋಕಚಂದ್ರ ತಿಳಿಸಿದರು.

1000 ದೇವಾಲಯ: ಮುಜರಾಯಿ ಇಲಾಖೆಗೆ ಸೇರಿದ 1336 ದೇಗುಲಗಳು ಜಿಲ್ಲೆಯಲ್ಲಿ ಇವೆ. ಆದರೆ, ಅವುಗಳ ಪೈಕಿ ಒಂದು ಸಾವಿರ ದೇಗುಲಗಳಲ್ಲಿ ದಲಿತರ ಪ್ರವೇಶ ಇನ್ನೂ ಆಗಿಲ್ಲ. ಆ ಎಲ್ಲ ದೇಗುಲಗಳಿಗೂ ದಲಿತರಿಗೆ ಪ್ರವೇಶ ಕೊಡಿಸುವುದು ಸಮಿತಿ ಮುಖ್ಯ ಉದ್ದೇಶ ಎಂದು ಜಿ.ಶಿವಪ್ಪ ತಿಳಿಸಿದರು.

ದಲಿತರ ಗೃಹಪ್ರವೇಶ ಕಾರ್ಯಕ್ರಮ­ಗಳನ್ನು ನಡೆಸಿದ ಹಲವು ಮುಖಂಡರನ್ನು ಸನ್ಮಾನಿಸ­ಲಾಯಿತು.

Write A Comment