ಕರ್ನಾಟಕ

ಬಲಿಜ ಜನಾಂಗವನ್ನು 2ಎ ವರ್ಗಕ್ಕೆ ಸೇರಿಸಿ: ರಾಜ್ಯ ಬಲಿಜ ಸಂಘದ ಅಧ್ಯಕ್ಷ ಟಿ.ವೇಣು­ಗೋಪಾಲ್‌ ಆಗ್ರಹ

Pinterest LinkedIn Tumblr

pvec1decsBalija 01

ಬೆಂಗಳೂರು: ‘ಬಲಿಜ ಜನಾಂಗವನ್ನು ಸರ್ಕಾರ 2ಎ ವರ್ಗಕ್ಕೆ ಸೇರಿಸುವುದ­ರೊಂ­ದಿಗೆ ಉದ್ಯೋಗ ಮತ್ತು ರಾಜ­ಕೀಯ ಕ್ಷೇತ್ರದಲ್ಲಿ ಮೀಸಲಾತಿ ನೀಡಲು ಕ್ರಮ ಕೈಗೊಳ್ಳಬೇಕು’ ಎಂದು ರಾಜ್ಯ ಬಲಿಜ ಸಂಘದ ಅಧ್ಯಕ್ಷ ಟಿ.ವೇಣು­ಗೋಪಾಲ್‌ ಆಗ್ರಹಿಸಿದರು.

ಸಂಘವು ನಗರದಲ್ಲಿ ಭಾನುವಾರ ಆಯೋಜಿಸಿದ್ದ ಬಲಿಜ ಸಂಘಗಳ ಸಮಾವೇಶ­ದಲ್ಲಿ ಅವರು ಮಾತ­ನಾಡಿದರು.
‘ವೀರಪ್ಪ ಮೊಯಿಲಿ ಅವರು ಮುಖ್ಯ­ಮಂತ್ರಿ­ಯಾಗಿದ್ದ ವೇಳೆ ಅನ­ವಶ್ಯಕ­ವಾಗಿ 2ಎ ವರ್ಗದ ಪಟ್ಟಿಯಿಂದ ಬಲಿಜ ಜನಾಂಗವನ್ನು ತೆಗೆದು ಹಾಕಿದರು. ಅದನ್ನು ಪುನಃ ಪಟ್ಟಿಗೆ ಸೇರಿಸಬೇಕೆಂದು ಕಳೆದ 18 ವರ್ಷಗಳಿಂದ ಹೋರಾ­ಡುತ್ತ ಬಂದಿದ್ದೇವೆ. ಯಡಿಯೂರಪ್ಪ­ನವರು ಮುಖ್ಯಮಂತ್ರಿ­ಯಾಗಿದ್ದ ಸಂದ­ರ್ಭ­ದಲ್ಲಿ     ಜನಾಂಗಕ್ಕೆ ಶೈಕ್ಷಣಿಕ ಮೀಸ­ಲಾತಿ ನೀಡಿದರು. ಆದರೆ, ಉದ್ಯೋಗ ಮತ್ತು ರಾಜಕೀಯ ಮೀಸಲಾತಿ ಈವ­ರೆಗೆ ಸಿಕ್ಕಿಲ್ಲ. ಸರ್ಕಾರ ಕೂಡಲೇ ಈ ಕುರಿತು ಗಮನ ಹರಿಸಬೇಕು’ ಎಂದರು.

‘ಸರ್ಕಾರ ಜನಾಂಗದ ಹೆಣ್ಣುಮಕ್ಕಳಿ­ಗಾಗಿ ವಸತಿ ನಿಲಯ ನಿರ್ಮಾಣ ಮಾಡ­ಬೇಕು. ಯೋಗಿ ನಾರೇಯಣ ವಿಶ್ವವಿದ್ಯಾಲಯ ನಿರ್ಮಿಸಲು 50 ಎಕರೆ ಜಮೀನು ನೀಡ­ಬೇಕು. ಬೆಂಗ­ಳೂರು ವಿಶ್ವ­ವಿದ್ಯಾಲಯ­ದಲ್ಲಿ ಯೋಗಿ ನಾರೇಯಣ ಅವರ ಹೆಸರಿ­ನಲ್ಲಿ ಅಧ್ಯ­ಯನ ಪೀಠ ಆರಂಭಿಸ­ಬೇಕು. ಜನಾಂ­ಗದ ಗುರುಪೀಠ ಸ್ಥಾಪಿ­ಸಲು ಜಮೀನು ಮಂಜೂರು ಮಾಡ­ಬೇಕು. ಮಂತ್ರಿ ಮಂಡಲದಲ್ಲಿ ಜನಾಂ­ಗ­ದವರಿಗೆ ಆದ್ಯತೆ ನೀಡಬೇಕು’ ಎಂದು ವೇದಿಕೆ ಮೇಲಿದ್ದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರಿಗೆ ಬೇಡಿಕೆ ಪತ್ರ ಸಲ್ಲಿಸಿದರು.

ರಾಮಲಿಂಗಾರೆಡ್ಡಿ ಅವರು ಮಾತ­ನಾಡಿ, ‘ಬಲಿಜ ಜನಾಂಗದ ಬೇಡಿಕೆಗ­ಳನ್ನು ಈಡೇರಿಸುವ ನಿಟ್ಟಿನಲ್ಲಿ ಮುಖ್ಯ­ಮಂತ್ರಿಗಳೊಂದಿಗೆ ಮಾತನಾಡು­ತ್ತೇನೆ. ಜನಸಂಖ್ಯೆಯ ಅನುಪಾತಕ್ಕೆ ಅನುಗುಣ­ವಾಗಿ ಜಾತಿ­ಗಳಿಗೆ ಸಾಮಾಜಿಕ ನ್ಯಾಯ ಸಿಗಲಿ ಎನ್ನುವ ಕಾರಣಕ್ಕೆ ಜಾತಿಗಣತಿ ಕಾರ್ಯ ಹಮ್ಮಿಕೊಳ್ಳಲಾಗುತ್ತಿದೆ’ ಎಂದು ಹೇಳಿದರು. ಉದ್ಯಮಿ ಟಪಾಲ್‌ ಗಣೇಶ್‌ ಮತ್ತಿತರರು ಉಪಸ್ಥಿತರಿದ್ದರು.

Write A Comment