ಕರ್ನಾಟಕ

ಬಾಲಕಿ ಅಪಹರಿಸಿ ಅತ್ಯಾಚಾರಗೈದ ಆರೋಪಿಯ ಬಂಧನ

Pinterest LinkedIn Tumblr

rape 2_2

ಮಳವಳ್ಳಿ, ನ.16: ಬಾಲಕಿಯೊಬ್ಬಳ್ಳನ್ನು ಅಪಹರಿಸಿ ಆಕೆಯ ಮೇಲೆ ಅತ್ಯಾಚಾರ ನಡೆಸಿದ ಆರೋಪದ ಮೇರೆಗೆ ಯುವಕನೋರ್ವನನ್ನು ಬೆಳಕವಾಡಿ ಪೊಲೀಸರು ಬಂಧಿಸಿದ್ದಾರೆ.

ಚಾಮರಾಜನಗರ ತಾಲೂಕು ಉಮ್ಮತ್ತೂರು ಗ್ರಾಮದ ವಾಸಿಯಾದ ವಿಘ್ನೇಶ್ ಎಂಬಾತ ಬಂಧಿತ ಆರೋಪಿಯಾಗಿದ್ದು, ಮನೆಗಳಿಗೆ ಬಣ್ಣ ಹೊಡೆಯುವ ಕೆಲಸ ಮಾಡುವ ಈತ ಚಿಕ್ಕಬಾಗಿಲು ಗ್ರಾಮದ ಮಹಾದೇವಪ್ಪ ಎಂಬುವರ ಮನೆಗೆ ಬಣ್ಣ ಹೊಡೆಯುವ ಕೆಲಸಕ್ಕೆ ಬಂದಿದ್ದನು. ಕೆಲಸದ ವೇಲೆ ಮಹಾದೇವಪ್ಪ ಅವರ ಮಗಳು ಮನುಜಳಿಗೆ ಪರಿಚಿತನಾದ ಈತ ಪರಿಚಯವನ್ನೇ ಬಳಸಿಕೊಂಡು ಪ್ರೀತಿಸುವ ನಾಟಕವಾಡಿ ಕಳೆದ 4 ರಂದು ತನ್ನ ಸ್ನೇಹಿತರ ಜೊತೆಗೂಡಿ ಆಕೆಯನ್ನು ಅಪಹರಿಸಿದ್ದನೆಂದು ಆರೋಪಿಸಲಾಗಿದೆ. ನಂತರ ಆಕೆಯನ್ನು ಮೈಸೂರು, ಚಾಮರಾಜನಗರ, ಕೊಯ್ಯಮತ್ತೂರು ಮುಂತಾದ ಕಡೆಗಳಲ್ಲಿ ತನ್ನ ಪರಿಚಯದವರ ಮನೆಯಲ್ಲಿ ಇರಿಸಿಕೊಂಡು ಈಕೆಯ ಮೇಲೆ ಅತ್ಯಾಚಾರವೆಸಗಿದ್ದಾನೆಂದು ಆರೋಪಿಸಲಾಗಿದೆ.

ತನ್ನ ಮಗಳು ಇದ್ದಕ್ಕಿದ್ದಂತೆ ಕಾಣೆಯಾಗಿದ್ದರಿಂದ ಆತಂಕಕ್ಕೊಳಗಾದ ಪೋಷಕರು ಎಲ್ಲ ಕಡೆ ವಿಚಾರಿಸುತ್ತಿರುವಾಗಲೇ ಮೊಬೈಲ್ ಮೂಲಕ ಮನೆಯವರನ್ನು ಸಂಪರ್ಕಿಸಿದ ಆರೋಪಿ ತಮ್ಮ ಮಗಳು ಆತನ ಜೊತೆಗಿದ್ದು ಈ ಬಗ್ಗೆ ಪೊಲೀಸರಿಗೆ ದೂರು ನೀಡಿದರೆ ಪರಿಣಾಮ ನೆಟ್ಟಗಿರುವುದಿಲ್ಲ ಎಂದು ಧಮಕಿ ಹಾಕಿದ್ದ ಎನ್ನಲಾಗಿದೆ.

ಈ ಬಗ್ಗೆ ಬಾಲಕಿಯ ಪೋಷಕರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಬೆಳಕವಾಡಿ ಪಿಎಸ್‌ಐ ನಂಜಪ್ಪ ಹಾಗೂ ಸಿಬ್ಬಂದಿ ಆತನ ಸುಳಿವು ಪತ್ತೆಹಚ್ಚಿ ಬಾಲಕಿ ಸಮೇತ ಆರೋಪಿಯನ್ನು ನಿನ್ನೆ ಬಂಧಿಸಿ ಕರೆತಂದಿದ್ದಾರೆ. ಬಾಲಕಿಯ ಹೇಳಿಕೆ ಅಧರಿಸಿ ಆರೋಪಿ ವಿರುದ್ದ ಅಪಹರಣ ಹಾಗೂ ಅತ್ಯಾಚಾರ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

Write A Comment