ಕರ್ನಾಟಕ

ಬಾಲಕಿ ಮೇಲೆ ಅತ್ಯಾಚಾರ ಆರೋಪ: ಗುಲ್ಬರ್ಗದ ಕಂಬಳೇಶ್ವರ ಸ್ವಾಮೀಜಿ ಬಂಧನ

Pinterest LinkedIn Tumblr

pvec18BRY-klb1

ಕಲಬುರ್ಗಿ: ಬಾಲಕಿ ಮೇಲೆ ಅತ್ಯಾಚಾರ ಎಸ­ಗಿ­ದ್ದಾರೆ ಎಂಬ ಆರೋಪ ಎದು­ರಿ­ಸು­ತ್ತಿರುವ ಜಿಲ್ಲೆಯ ಚಿತ್ತಾಪುರ ಪಟ್ಟಣದ ಕಂಬಳೇಶ್ವರ ಮಠದ ಪೀಠಾಧಿಪತಿ ಸೋಮ­ಶೇಖರ ಶಿವಾಚಾರ್ಯ ಸ್ವಾಮೀಜಿ ಅವರನ್ನು ಪೊಲೀಸರು ಸೋಮವಾರ ಬಂಧಿಸಿದ್ದಾರೆ.
ಪಕ್ಕದ ಜಿಲ್ಲೆಗೆ ಇವರು ಪಲಾಯನ ಮಾಡಲು ಯತ್ನಿಸುತ್ತಿದ್ದಾರೆ ಎಂಬ ಖಚಿತ ಮಾಹಿತಿ ಆಧರಿಸಿ ಕಾರ್ಯಾ­­ಚರಣೆ ನಡೆಸಿದ ಪೊಲೀಸರು ಚಿತ್ತಾಪುರ ಹೊರ­ವಲಯ ಬಳಿ ಬಂಧಿಸಿ, ನ್ಯಾಯಾ­ಲಯಕ್ಕೆ ಹಾಜರು ಪಡಿಸಿದರು.

ಪ್ರಕರಣದ ವಿಚಾರಣೆ ನಡೆಸಿದ ವಿಶೇಷ ನ್ಯಾಯಾಲಯ, ಐಪಿಸಿ 376 (ಅತ್ಯಾ­ಚಾರ) ಹಾಗೂ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆ–2012 (ಪೋಕ್ಸೊ)­ರ ಅಡಿ ನ. 29ರ ವ­ರೆಗೆ ಸೋಮಶೇಖರ ಸ್ವಾಮೀಜಿ ಅವ­ರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತು.
ನ್ಯಾಯಾಲಯಕ್ಕೆ ಹಾಜ­ರಾದ ಬಳಿಕ ಸುದ್ದಿ­­ಗಾರರೊಂದಿಗೆ ಮಾತನಾಡಿದ ಸ್ವಾಮೀಜಿ, ‘ವೈದ್ಯ­ಕೀಯ ವರದಿ ಬಳಿಕ ಸತ್ಯಾ­­ಸತ್ಯತೆ ಹೊರಬೀಳಲಿದೆ. ಆ ಬಳಿ­ಕವೂ ನಾನು ಕಂಬಳೇಶ್ವರ ಮಠದ ಪೀಠಾ­­­­ಧಿ­ಪತಿಯಾಗಿ ಮುಂದು­ವರಿ­ಯು­ತ್ತೇನೆ.

ನನ್ನ ವಿರುದ್ಧ ದೂರು ನೀಡಿರು­ವ­ವರು ನನ್ನ ವಿರೋಧಿಗಳಲ್ಲ. ಆದರೆ, ಈಗ ವಿರೋ­ಧಿಗಳಂತೆ ವರ್ತಿಸುತ್ತಿದ್ದಾರೆ. ಬಾಲ­­ಕಿಯ ಪೋಷಕರು ಇದುವರೆಗೂ ದೂರು ನೀಡಿಲ್ಲ. ಶೀಘ್ರದಲ್ಲೇ ಸತ್ಯಾಂಶ ಬಹಿರಂಗವಾಗಲಿದೆ’ ಎಂದು ಹೇಳಿದರು. ‘ಬಾಲಕಿಯ ಪೋಷಕರಿಗೆ ನಾಲ್ಕು ಎಕರೆ ಜಮೀನು, ₨ 2 ಲಕ್ಷ ಆಮಿಷ­ವೊ­ಡ್ಡ­­ಲಾಗಿದೆ’ ಎಂಬ ಆರೋಪಕ್ಕೆ ಸಂಬಂಧಿ­­ಸಿ­ದಂತೆ ಪ್ರತಿಕ್ರಿಯಿಸಿದ ಸ್ವಾಮೀಜಿ, ‘ಮಠದ ದಾಸೋಹ ಮನೆಯ ಗೋಡೆ ಕುಸಿದು ಬಿದ್ದಿದ್ದು, ಅದನ್ನು ಕಟ್ಟಿಸಲು ನನ್ನ ಬಳಿ ಹಣವಿಲ್ಲ. ಹೀಗಿರುವಾಗ ಇಷ್ಟೊಂದು ಹಣ ಹೇಗೆ ಕೊಡಲು ಸಾಧ್ಯ?’ ಎಂದು ಕೇಳಿದರು.

ಏನಾಗಿತ್ತು?: ಕಂಬಳೇಶ್ವರ ಮಠದ  ಸೋಮ­­­­­­­­­ಶೇಖರ ಶಿವಾಚಾರ್ಯ ಸ್ವಾಮೀಜಿ  11 ವರ್ಷದ ಬಾಲಕಿ ಮೇಲೆ ಅತ್ಯಾ­ಚಾರ ಎಸಗಿದ್ದಾರೆ. ಆದ್ದ­­­ರಿಂದ ­ಅವ­­­ರನ್ನು ಕೂಡಲೇ ಬಂಧಿಸ­ಬೇಕು ಎಂದು ಪಟ್ಟಣದ ಪ್ರಮುಖರು ನ.15­­ರಂದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ, ಭಾನುವಾರ (ನ. 16)­ ಪ್ರತಿಭಟನೆ ನಡೆಸಿದ್ದರು.

1 Comment

Write A Comment