ಕರ್ನಾಟಕ

ಗುಂಡು ಹಾರಿಸಿ ರಸಗೊಬ್ಬರ ವ್ಯಾಪಾರಿಯ ಕೊಲೆ: ಗುಲ್ಬರ್ಗ ಬಂದ್‌ಗೆ ವರ್ತಕರ ಕರೆ

Pinterest LinkedIn Tumblr

Gun

ಬೆಂಗಳೂರು, ಅ.10: ಗುಲ್ಬರ್ಗದಲ್ಲಿ ದುಷ್ಕರ್ಮಿಗಳು ರಸಗೊಬ್ಬರ ಅಂಗಡಿ ವ್ಯಾಪಾರಿಯೊಬ್ಬರನ್ನು ಗುಂಡು ಹಾರಿಸಿ ಕೊಲೆ ಮಾಡಿ, ಹಣದ ಚೀಲದೊಂದಿಗೆ ಪರಾರಿಯಾದ ಘಟನೆ ನಡೆದಿದೆ.

ರಸಗೊಬ್ಬರ ಅಂಗಡಿ ಮಾಲಕ ಶಿವಶರಣಪ್ಪ ಹೊಸಮನಿ(42) ಕೊಲೆಯಾದವರು. ಗುರುವಾರ ರಾತ್ರಿ ಅಂಗಡಿ ಮುಚ್ಚಿಕೊಂಡು ಮನೆಗೆ ದ್ವಿಚಕ್ರ ವಾಹನದಲ್ಲಿ ಶಿವಶರಣಪ್ಪ ಹೋಗುತ್ತಿದ್ದಾಗ, ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು ನಾಡ ಬಂದೂಕಿನಿಂದ ಅವರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಎದೆಗೆ ನೇರವಾಗಿ ಗುಂಡು ಬಿದ್ದ ಕಾರಣ ಸ್ಥಳದಲ್ಲೇ ಶಿವಶರಣಪ್ಪ ಮೃತಪಟ್ಟಿದ್ದು, ಅವರ ಕೈಯಲ್ಲಿದ್ದ ಹಣದ ಚೀಲದೊಂದಿಗೆ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ.

ಘಟನಾ ಸ್ಥಳಕ್ಕೆ ಎಸ್ಪಿ ಅಮಿತ್‌ಸಿಂಗ್ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಜೇವರ್ಗಿ ಠಾಣಾ ಪೊಲೀಸರು ಪ್ರಕರಣ ದಾಖಲಿಸಿ ಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಬಂದ್‌ಗೆ ಕರೆ: ನಗರದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಆರೋಪಿಸಿ ಮತ್ತು ಶಿವಶರಣಪ್ಪ ಕೊಲೆಯನ್ನು ಖಂಡಿಸಿ ರಸಗೊಬ್ಬರ ವ್ಯಾಪಾರಿಗಳು ಶುಕ್ರವಾರ ಗುಲ್ಬರ್ಗ ಬಂದ್‌ಗೆ ಕರೆ ನೀಡಿದ್ದು, ನಗರದ ಎಲ್ಲ ರಸಗೊಬ್ಬರ ಅಂಗಡಿಗಳನ್ನು ಮುಚ್ಚಲಾಗಿತ್ತು.

Write A Comment