ಕರ್ನಾಟಕ

ಪ್ರೀತಿಗಾಗಿ ಸ್ನೇಹಿತನ ಕೊಲೆ: ಆರೋಪಿಯ ಬಂಧನ

Pinterest LinkedIn Tumblr

arrest2222

ಬೆಂಗಳೂರು, ಸೆ. 14: ಸ್ನೇಹಿತರಿಬ್ಬರು ಒಂದೇ ಹುಡುಗಿಯನ್ನು ಪ್ರೀತಿಸುವ ವಿಚಾರಕ್ಕೆ ಜಗಳ ಮಾಡಿಕೊಂಡು ಓರ್ವನ ಕೊಲೆಗೈದ ಆರೋಪದ ಮೇಲೆ ಎಚ್‌ಎಎಲ್ ಠಾಣಾ ಪೊಲೀಸರು ಅಸ್ಸಾಂ ಮೂಲದ ಭದ್ರತಾ ಸಿಬ್ಬಂದಿಯೊಬ್ಬನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಧಿತ ಆರೋಪಿಯನ್ನು ಅಸ್ಸಾಂ ಮೂಲದ ಇಲ್ಲಿನ ದೇವರ ಬೀಸನಹಳ್ಳಿ ನಿವಾಸಿ ರಾಕೇಶ್ ಹಜಾರಿಕ (24) ಎಂದು ಗುರುತಿಸಲಾಗಿದೆ. ಆರೋಪಿ ರಾಕೇಶ್ ಹಜಾರಿಕ ಸೆ.6ರಂದು ತನ್ನ ಸ್ನೇಹಿತ ಅಸ್ಸಾಂ ಮೂಲದ ಪ್ರದೀಪ್ ದೇಬನಾಥ್‌ನನ್ನು ಕೊಲೆ ಮಾಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದ ಆರೋಪಿ ರಾಕೇಶ್ ಮತ್ತು ಕೊಲೆಯಾದ ಪ್ರದೀಪ್ ಇಬ್ಬರು ಒಂದೇ ಯುವತಿಯನ್ನು ಪ್ರೀತಿಸುತ್ತಿದ್ದರು. ಇದೇ ವಿಷಯಕ್ಕೆ ಇಬ್ಬರ ಮಧ್ಯೆ ಜಗಳ ನಡೆದಿತ್ತು. ಇಬ್ಬರು ಒಂದೇ ಕೊಠಡಿಯಲ್ಲಿ ವಾಸ ವಾಗಿದ್ದರು. ಸೆ.6ರಂದು ಪ್ರದೀಪ್ ಮಲಗಿದ್ದ ಸಂದರ್ಭದಲ್ಲಿ ಕತ್ತು ಕೊಯ್ದು ಕೊಲೆ ಮಾಡಿ ತಲೆ ಮರೆಸಿಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಮೊಕದ್ದಮೆ ದಾಖಲು ಮಾಡಿಕೊಂಡಿರುವ ಎಚ್‌ಎಎಲ್ ಠಾಣಾ ಪೊಲೀಸರು ಮೊಕದ್ದಮೆ ದಾಖಲು ಮಾಡಿಕೊಂಡಿದ್ದು ತನಿಖೆ ಕೈಗೊಂಡಿದ್ದಾರೆ.

Write A Comment