ಕರಾವಳಿ

ಕಾಂಗ್ರೆಸ್ ನಾಮಕಾವಸ್ಥೆಯ ವ್ಯಕ್ತಿಗೆ ಎಂ.ಎಲ್‌.ಸಿ ಟಿಕೆಟ್ ನೀಡದೇ ಸಮರ್ಥ ಅಭ್ಯರ್ಥಿಗೆ ನೀಡಿದೆ: ಕಿಶನ್ ಹೆಗ್ಡೆ ಕೊಳ್ಕೆಬೈಲು

Pinterest LinkedIn Tumblr

ಕುಂದಾಪುರ: ಯಾವುದೇ ಒಬ್ಬ ನಾಮಕಾವಸ್ಥೆಯ ಅಭ್ಯರ್ಥಿಯನ್ನಾಗಲಿ, ಹೊಸ ಮುಖವನ್ನಾಗಲಿ ಕಾಂಗ್ರೆಸ್ ಪಕ್ಷ ಚುನಾವಣೆಗೆ ನಿಲ್ಲಿಸಿಲ್ಲ. ಬದಲಾಗಿ‌ ಸತತ 35 ವರ್ಷಗಳಿಂದ ರಾಜಕೀಯದಲ್ಲಿದ್ದು ಈ ಹಿಂದೆ ಶಿವಮೊಗ್ಗ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ ಮಂಜುನಾಥ ಭಂಡಾರಿಯವರಿಗೆ ಟಿಕೆಟ್‌ ನೀಡಿ ಕಾಂಗ್ರೆಸ್ ಉತ್ತಮ ಸಂದೇಶ ರವಾನಿಸಿದೆ ಎಂದು ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಕಿಶನ್ ಹೆಗ್ಡೆ ಕೊಳ್ಕೆಬೈಲು ಹೇಳಿದರು.

ಕುಂದಾಪುರದಲ್ಲಿ ಮಾಧ್ಯಮಗಳ ಜೊತೆ‌ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದಲ್ಲಿ ನಿಷ್ಟಾವಂತ ಹಾಗೂ ತಳಮಟ್ಟದ ಕಾರ್ಯಕರ್ತರಿಗೆ ಎಂದಿಗೂ ಬೆಲೆಯಿದೆ. ಕಾರ್ಯಕರ್ತನಾಗಿ‌ ಕೆಲಸ ಮಾಡಿದವರು‌ ನಾಯಕರಾಗಿ ರೂಪುಗೊಳ್ಳಬಹುದು ಎಂಬುದು ಕಾಂಗ್ರೆಸ್ ಪಕ್ಷದಲ್ಲಿ ಮಾತ್ರ ಸಾಧ್ಯ. ವಿಧಾನ ಪರಿಷತ್ ಸದಸ್ಯ ಪ್ರತಾಪಚಂದ್ರ ಶೆಟ್ಟಿಯವರ ಪರಂಪರೆ ಹಾಗೂ ಸಾಧನೆಯನ್ನು ಮುಂದುವರೆಸಿಕೊಂಡು ಹೋಗುವ ಸಮರ್ಥ‌ ಅಭ್ಯರ್ಥಿಗೆ ಈ ಬಾರಿ ಪಕ್ಷ ಟಿಕೇಟ್ ನೀಡಿದೆ ಎಂದರು.

ಡಿ.10 ರಂದು ವಿಧಾನಪರಿಷತ್ ಚುನಾವಣೆ ನಡೆಯಲಿದ್ದು ಸ್ಥಳೀಯ ಸಂಸ್ಥೆ ಚುನಾಯಿತ ಸದಸ್ಯರುಗಳು ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಮಂಜುನಾಥ ಭಂಡಾರಿ ಆಗಿದ್ದು ಪಂಚಾಯತ್ ರಾಜ್ ವಿಚಾರದಲ್ಲಿ‌ ಆಳ ಅಧ್ಯಯನ ಮಾಡಿ ಪಿ.ಎಚ್.ಡಿ ಪಡೆದಿದ್ದಾರೆ. ಅವರಿಗೆ ನೂರು ಶೇಖಡಾ ಮತ ನೀಡಬೇಕು ಎಂದು‌ ಮನವಿ‌ ಮಾಡಿದರು.

Comments are closed.