ಕರಾವಳಿ

ಮುಂಬೈಯಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಉಡುಪಿ ಕೊಳಲಗಿರಿಯ ಯುವಕ ಸಾವು

Pinterest LinkedIn Tumblr

ಉಡುಪಿ: ಮುಂಬೈನಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಇಲ್ಲಿನ ಕೊಳಲಗಿರಿ ಮೂಲದ ನಿವಾಸಿಯೊಬ್ಬರು ಸಾವನ್ನಪ್ಪಿದ್ದಾರೆ. ರೂಡಿ ರೋಷನ್ ಡಿಸೋಜಾ (33) ಮೃತಪಟ್ಟ ದುರ್ದೈವಿ.

ರೂಡಿ ರೋಷನ್ ಅವರು ಮುಂಬೈನ ಶಿಪ್‌ಯಾರ್ಡ್‌ನಲ್ಲಿ ಕಳೆದ 7 ವರ್ಷಗಳಿಂದ ಅಸಿಸ್ಟೆಂಟ್ ಮ್ಯಾನೇಜರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಅಕ್ಟೋಬರ್ 22 ರಂದು ರಾತ್ರಿ ಕೆಲಸ ಮುಗಿಸಿ ಮನೆಗೆ ವಾಪಸ್ಸಾಗುತ್ತಿದ್ದಾಗ ವೇಳೆ ಬೈಕ್ ಗೆ ಟ್ರಕ್ ಹಿಂದಿನಿಂದ ಡಿಕ್ಕಿ ಹೊಡೆದು ಗಂಭೀರ ಗಾಯಗೊಂಡಿದ್ದರು. ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅಷ್ಟರಲ್ಲಾಗಲೇ ಅವರು ಸಾವನ್ನಪ್ಪಿದರು.

ಮೃತರು ಪಾಲಕರಾದ ಆಲ್ಫ್ರೆಡ್ ಡಿಸೋಜಾ ಮತ್ತು ಮೇರಿ ಡಿಸೋಜಾ, ಪತ್ನಿ ಸುರುಚಿ ಡಿಸೋಜಾ ಮತ್ತು ಪುತ್ರ ಇವಾನ್ ಡಿಸೋಜಾ ಅವರನ್ನು ಅಗಲಿದ್ದಾರೆ.

ರೂಡಿಯವರ ಪಾರ್ಥಿವ ಶರೀರವನ್ನು ಇಂದು ಊರಿಗೆ ತರಲಾಗುತ್ತಿದ್ದು ಸಂಜೆ ಕೋಲಲಗಿರಿ ಚರ್ಚ್‌ನಲ್ಲಿ ಅಂತ್ಯಕ್ರಿಯೆ ನಡೆಯಲಿದೆ.

 

 

Comments are closed.