ಕರಾವಳಿ

ಮುಂದುವರಿದ ತೌಖ್ತೇ ಅಬ್ಬರ; ಕುಂಭಾಸಿಯಲ್ಲಿ ಮನೆ ಮೇಲ್ಚಾವಣಿಗೆ ಹಾನಿ, ಅಪಾರ ನಷ್ಟ

Pinterest LinkedIn Tumblr

ಕುಂದಾಪುರ: ತೌಖ್ತೇ ಚಂಡಮಾರುತದ ಅಬ್ಬರ‌ ಉಡುಪಿ ಕರಾವಳಿಯಲ್ಲಿ ಭಾನುವಾರವೂ ಕೂಡ ಹೆಚ್ಚಿದೆ.

 

ಭಾನುವಾರ ಬೆಳಿಗ್ಗೆ ಗಾಳಿ ಮಳೆಯಾಗಿದ್ದು ಕುಂದಾಪುರ ತಾಲೂಕಿನ ಕುಂಭಾಶಿ ಗ್ರಾಮದ ಪಣ್ ಹತ್ವಾರ್ ಬೆಟ್ಟಿನಲ್ಲಿರುವ ಮಧು ಎಂಬುವವರ ಮನೆಯ ಮೇಲ್ಚಾವಣಿಯು ಸಂಪೂರ್ಣವಾಗಿ ಹಾನಿಗೊಳಗಾಗಿದ್ದು ಅಪಾರ ನಷ್ಟ ಸಂಭವಿಸಿದ ಬಗ್ಗೆ ವರದಿಯಾಗಿದೆ.

ಮನೆ ಮಂದಿ ಅದೃಷ್ಟವಶಾತ್ ಪಾರಾಗಿದ್ದಾರೆ. ಸ್ಥಳಕ್ಕೆ ಗ್ರಾಮಪಂಚಾಯತ್ ಪ್ರತಿನಿಧಿಗಳು ಭೇಟಿ ನೀಡಿದ್ದು ಅಧಿಕಾರಿಗಳು ಇನ್ನಷ್ಟೇ ಭೇಟಿ ನೀಡಿ ಹಾನಿಯ ಬಗ್ಗೆ ಪರಿಶೀಲಿಸಿ ಸೂಕ್ತ ಕ್ರಮಕೈಗೊಳ್ಳಬೇಕಿದೆ.

Comments are closed.