ಕರಾವಳಿ

ಯಕ್ಷಗಾನ ವೇಳೆ ಮೊಬೈಲ್ ಕದ್ದಿದ್ದ ಆರೋಪಿಯನ್ನು ಬಂಧಿಸಿದ ಶಂಕರನಾರಾಯಣ ಪೊಲೀಸರು

Pinterest LinkedIn Tumblr

ಕುಂದಾಪುರ: ತಾಲೂಕಿನ ಅಂಪಾರು ಎಂಬಲ್ಲಿ ಯಕ್ಷಗಾನ ನಡೆಯುತ್ತಿದ್ದ ವೇಳೆ ಮನೆ ಸಮೀಪದ ಮದುವೆ ಮಂಟಪದಿಂದ ಮೊಬೈಲ್ ಫೋನ್ ಕದ್ದ ಆರೋಪಿಯನ್ನು ಶಂಕರನಾರಾಯಣ ಪೊಲೀಸರು ಬಂಧಿಸಿದ್ದಾರೆ.

ಜಡ್ಕಲ್ ಕಾನ್ಕಿ ಹೊರಮಕ್ಕಿ‌ ನಿವಾಸಿ ವಿಜಯ್ ಶೆಟ್ಟಿ ಬಂಧಿತ ಆರೋಪಿ.

ಕಳೆದ ತಿಂಗಳು 16 ತಾರಿಖು ಅಂಪಾರಿನ ರವಿರಾಜ್ ಭಟ್ ಎನ್ನುವರ ಮನೆಯಲ್ಲಿ ಯಕ್ಷಗಾನ ನಡೆಯುತ್ತಿದ್ದ ವೇಳೆ ಆರೋಪಿ‌ ಅವರ ಮನೆ ಸಮೀಪದ ಮದುವೆ ಹಾಲ್ ನಿಂದ 30 ಸಾವಿರ ಮೌಲ್ಯದ ಮೊಬೈಲ್ ಫೋನ್ ಕಳವುಗೈದಿದ್ದ.

ಸದ್ಯ ಆರೋಪಿಯನ್ನು ಬಂಧಿಸಿದ ಶಂಕರನಾರಾಯಣ ಪಿಎಸ್ಐ ಶ್ರೀಧರ್ ನಾಯ್ಕ್ ತಂಡ ಮೊಬೈಲ್ ವಶಕ್ಕೆ ಪಡೆದಿದ್ದಾರೆ.

ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

 

Comments are closed.