ಕರಾವಳಿ

ಸರ್ಕಾರಿ ಆಸ್ಪತ್ರೆಯಲ್ಲಿನ ರೋಗಿಗಳಿಗೆ ಹಣ್ಣು-ಹಂಪಲು ವಿತರಿಸಿ ಜನ್ಮದಿನ ಆಚರಿಸಿದ ಕಾಂಗ್ರೆಸ್ ಯುವ ಮುಖಂಡ

Pinterest LinkedIn Tumblr

ಕುಂದಾಪುರ: ಯುವ ಕಾಂಗ್ರೆಸ್ ಮುಖಂಡ, ಕುಂದಾಪುರ ಇಂಟಕ್ ಮಾಜಿ ಅಧ್ಯಕ್ಷ ಅಜಿತ್ ಕುಮಾರ್ ಶೆಟ್ಟಿ ವಡ್ಡರ್ಸೆ ಅವರ ಜನುಮ ದಿನದ ಅಂಗವಾಗಿ ಫೆ.12 ರಂದು ಕುಂದಾಪುರ ಸಾರ್ವಜನಿಕ ಆಸ್ಪತ್ರೆಯಲ್ಲಿ ದಾಖಲಾದ ಒಳರೋಗಿ ವಿಭಾಗದಲ್ಲಿರುವವರಿಗೆ ಹಣ್ಣು-ಹಂಪಲನ್ನು ಭಂಡಾರ್ಕಾರ್ಸ್ ಕಾಲೇಜಿನ ಎನ್.ಎಸ್.ಯು.ಐ ವಿದ್ಯಾರ್ಥಿಗಳು ವಿತರಿಸಿದರು.

ಬೆಳಿಗ್ಗೆ ಆಸ್ಪತ್ರೆಗೆ ಆಗಮಿಸಿದ ಅವರು ಪ್ರತಿ‌ ವಾರ್ಡುಗಳಿಗೆ ತೆರಳಿ ಅಲ್ಲಿರುವ ರೋಗಿಗಳಿಗೆ ಹಣ್ಣು ಹಂಪಲು ವಿತರಿಸಿದರು. ಈ ಸಂದರ್ಭ ಅಜಿತ್ ಕುಮಾರ್ ಶೆಟ್ಟಿ, ಭಂಡಾರ್ಕಾರ್ಸ್ ಕಾಲೇಜಿನ ಎನ್.ಎಸ್.ಯು.ಐ ಘಟಕದ ವಿದ್ಯಾರ್ಥಿಗಳಾದ ನಿಖಿಲ್ ಶೆಟ್ಟಿ, ನಿಖಿತ್ ಶೆಟ್ಟಿ, ಪ್ರಥ್ವಿ ಪೂಜಾರಿ, ಸುಶಾಂತ್ ಮೊಗವೀರ, ಸಂದೇಶ ಮೊಗವೀರ ಮೊದಲಾದವರು ಇದ್ದರು‌.

Comments are closed.