ಕರಾವಳಿ

ಮಹಾರಾಷ್ಟ್ರ ಸಿಎಂ ಉದ್ಧವ್ವ ಠಾಕ್ರೆ ಉದ್ಧಟತನ ಮಾತನಾಡಿದ್ದಾರೆ: ಉಡುಪಿಯಲ್ಲಿ ಸಿಎಂ ಬಿ.ಎಸ್.ವೈ ಹೇಳಿಕೆ

Pinterest LinkedIn Tumblr

ಉಡುಪಿ: ಮಹಾರಾಷ್ಟ್ರ ಸಿಎಂ ಮಾತನಾಡೋದು ಸರಿಯಲ್ಲ. ಕರ್ನಾಟಕದಲ್ಲಿ ಸೌಹಾರ್ಧ ವಾತಾವರಣ ಇದೆ. ಇದು ಶೋಭೆ ತರುವ ಹೇಳಿಕೆ ಅಲ್ಲ ನಾನು ಇದನ್ನು ಖಂಡಿಸುತ್ತೇನೆ, ನಮ್ಮ ಒಂದಿಂಚೂ ಭೂಮಿ ಕೊಡುವ ಪ್ರಶ್ನೆಯಿಲ್ಲ. ಅವರ ಮಾತು ಎಲ್ಲರಿಗೂ ಆಕ್ರೋಶ ತರುತ್ತಿದೆ ಕನ್ನಡ ಪರ ಸಂಘಟನೆ ತಲೆಕೆಡಿಸಿ ಕೊಳ್ಳಬಾರದು.ನಾವು ಕನ್ನಡಿಗರು ಒಟ್ಟಾಗಿರಬೇಕು ಎಂದು ಉಡುಪಿಯಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.

ಅವರು ಉಡುಪಿ ಹೆಲಿಪ್ಯಾಡಿಗೆ ಆಗಮಿಸಿದ ವೇಳೆ ಮಾಧ್ಯಮದ ಜೊತೆ ಮಾತನಾಡಿದರು.

ಹೆಚ್.ಎ.ಎಲ್ ವಿಮಾನ ನಿಲ್ದಾಣ ಬೆಂಗಳೂರಿನಿಂದ ಹೆಲಿಕಾಪ್ಟರ್ ಮೂಲಕ ಆದಿ‌ಉಡುಪಿ‌ ಹೆಲಿಪ್ಯಾಡ್ ಗೆ ಸಿಎಂ ಯಡಿಯೂರಪ್ಪ ಉಡುಪಿಯ ಸರ್ಕ್ಯೂಟ್ ಹೌಸ್ ಗೆ ಆಗಮಿಸಿದರು.

ಹೆಲಿಪ್ಯಾಡಲ್ಲಿ ಉಡುಪಿ ಜಿಲ್ಲಾಧಿಕಾರಿ ಜಿ‌. ಜಗದೀಶ್ ಸ್ವಾಗತಿಸಿದರು.

ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್, ಉಡುಪಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ ಬಾಬು,ಉಡುಪಿ ಶಾಸಕ ರಘಪತಿ ಭಟ್, ಉಡುಪಿ ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್,ಬೈಂದೂರು ಸುಕುಮಾರ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

 

Comments are closed.