ಕರಾವಳಿ

ಬೈಂದೂರು-ಯಡ್ತರೆಯಲ್ಲಿ ದನಕ್ಕೆ ಡಿಕ್ಕಿ ಹೊಡೆದ ಇನ್ನೋವಾ ಕಾರು ಪಲ್ಟಿ

Pinterest LinkedIn Tumblr

ಕುಂದಾಪುರ: ಬೈಂದೂರು ತಾಲೂಕು ಯಡ್ತರೆ ರಾಹುತಾನ ಕಟ್ಟೆ ಬಳಿ ಭಾನುವಾರ ತಡರಾತ್ರಿ ಇನ್ನೋವಾ ಕಾರು ಅಪಘಾತವಾಗಿದೆ.

ದನಕ್ಕೆ ಡಿಕ್ಕಿ ಹೊಡೆದ ಕಾರು ರಸ್ತೆಯ ಬಲಭಾಗಕ್ಕೆ ಉರುಳಿದೆ. ಮಂಗಳೂರು ಕಡೆ ಎಡಗಡೆ ಹೋಗುತ್ತಿದ್ದ ಕಾರು ಅಪಘಾತದ ರಬಸಕ್ಕೆ ಉರುಳಿ ಬಿದ್ದಿದ್ದು 3 ಜನ ಪ್ರಯಾಣಿಸುತ್ತಿದ್ದರು ಎಂದು ಹೇಳಲಾಗುತ್ತಿದೆ. ಗಾಯಾಳುಗಳನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಕಾರಿನಲ್ಲಿ ಬೇರೆ ರಿಜಿಸ್ಟ್ರೇಷನ್ ಇರುವ 3-4 ನಂಬರ್ ಪ್ಲೇಟ್ ಇದೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ. ಹೆಚ್ಚಿನ ವಿವರ ಇನ್ನಷ್ಟೇ ಲಭ್ಯವಾಗಬೇಕಿದೆ.

Comments are closed.