ಕರಾವಳಿ

ನಾಳೆ (ಡಿ.20) ಕಾಳಾವರದಲ್ಲಿ ಚಂಪಾ ಷಷ್ಠಿ; ದರ್ಶನಕ್ಕೆ ಮಾತ್ರವೇ ಅವಕಾಶ

Pinterest LinkedIn Tumblr

ಕುಂದಾಪುರ: ಇತಿಹಾಸ ಪ್ರಸಿದ್ಧ ಕಾಳಾವರ ಶ್ರೀ ಮಹಾಲಿಂಗೇಶ್ವರ ಮತ್ತು ಕಾಳಿಂಗ (ಸುಬ್ರಹ್ಮಣ್ಯ) ದೇವಸ್ಥಾನದಲ್ಲಿ ಡಿ.20, ಚಂಪಾಷಷ್ಠಿ ನಡೆಯಲಿದೆ. ಕುಂದಾಪುರ ತಾಲೂಕಿನ ಕೋಟೇಶ್ವರ ಸಮೀಪದಲ್ಲಿ ಕಾಳವಾರ ಕಾಳಿಂಗ ಸನ್ನಿಧಿಯಿದೆ.

ಕೋವಿಡ್ ಹಿನ್ನೆಲೆಯಲ್ಲಿ ಸರಕಾರದ ನಿಯಮಾವಳಿಯಂತೆ ದೇವರ ದರ್ಶನ ಹೊರತಾಗಿ ಬೇರೆ ಯಾವುದೇ ಸೇವೆ ಇರುವುದಿಲ್ಲ. ಡಿ.21 ರಂದು ಢಕ್ಕೆ ಬಲಿ, ತುಲಾಭಾರ ಸೇವೆ ಇರುವುದಿಲ್ಲ. ದೇವರ ದರ್ಶನ ಬೆಳಗ್ಗೆ 5 ರಿಂದ ಆರಂಭವಾಗಲಿದ್ದು, ಅಂಗಡಿ ಮುಂಗಟ್ಟು ಇರದೆ ಸರ್ಕಾರದ ಕೋವಿಡ್ ನಿಯಮದಂತೆ ಭಕ್ತರು ನಿಯಮ ಪಾಲನೆ ಕಡ್ಡಾಯ ಎಂದು ಆಡಳಿತಾಧಿಕಾರಿಗಳು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Comments are closed.