ಕರಾವಳಿ

ಸೀಲ್ ಡೌನ್ ಆಗಿದ್ದ ಮನೆಯಲ್ಲಿ ಕೊಳೆತ ಸ್ಥಿತಿಯಲ್ಲಿ ಶ#ವ ಪತ್ತೆ..!

Pinterest LinkedIn Tumblr

ಉಡುಪಿ: ಮಲ್ಪೆಯ ಕೆಮ್ಮಣ್ಣುವಿನ ಯಡಬೆಟ್ಟು ಮನೆಯೊಂದರಲ್ಲಿ ವ್ಯಕ್ತಿಯೊಬ್ಬರ ಶ#ವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ನಡೆದಿದೆ. ಶೇಖರ ಪೂಜಾರಿ(55) ಮೃ#ತ ವ್ಯಕ್ತಿ.

ವ್ಯಕ್ತಿ ಮೃ#ತಪಟ್ಟು 40 ದಿನಗಳಾಗಿರಬಹುದೆಂದು ಅಂದಾಜಿಸಲಾಗಿದೆ. ಇವರು ಮುಂಬೈಯಲ್ಲಿ ಹೋಟೆಲ್ ಕೆಲಸ ಮಾಡಿಕೊಂಡಿದ್ದು ಲಾಕ್ ಡೌನ್ ಸಮಯದಲ್ಲಿ ಊರಿಗೆ ಬಂದಿದ್ದರು. ಜುಲೈ.21 ರಂದು ಪಂಚಾಯತ್ ಅಧಿಕಾರಿ ಹಾಗೂ ಪೊಲೀಸ್ ಆಧಿಕಾರಿಗಳು ಈ ಮನೆಯನ್ನು ಸೀಲ್ ಡೌನ್ ಮಾಡಿದ್ದು, ಬಳಿಕ ಆತನ ಯಾವುದೇ ಸಂಪರ್ಕ ಇರುವುದಿಲ್ಲ. ಮೃ#ತ ಶೇಖರ್ ಅವರಿಗೆ ಕು#ಡಿತದ ಚಟವು ಇತ್ತೆಂದು ತನಿಖೆ ವೇಳೆ ತಿಳಿದುಬಂದಿದೆ.

ಉಡುಪಿಯಲ್ಲಿ ಮೊನ್ನೆ ಸುರಿದ ಮಳೆಯಿಂದ ಮಲ್ಪೆ ಪರಿಸರದಲ್ಲಿ ಬಹಳಷ್ಟು ಮನೆಗಳು ನೆರೆಗೆ ತುತ್ತಾಗಿದ್ದವು. ಮನೆ ಹಾನಿಯ ಪರಿಶೀಲಿಸಲು ಹೋದವರಿಗೆ ಈ ಘಟನೆ ಕಂಡುಬಂದಿದೆ. ಮಲ್ಪೆ ಠಾ#ಣಾಧಿಕಾರಿ ತಿಮ್ಮೇಶ್ ಬಿ.ಎನ್ ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ.

Comments are closed.