ಕರಾವಳಿ

ಎರಡು ತಂಡಗಳ ನಡುವೆ ತಲವಾರು ಕತ್ತಿ‌ ಕಾಳಗ: ಗಂಗೊಳ್ಳಿ ಠಾಣೆಯಲ್ಲಿ ಕೊಲೆ ಯತ್ನ ಕೇಸು ದಾಖಲು

Pinterest LinkedIn Tumblr

ಕುಂದಾಪುರ: ಕ್ಷುಲ್ಲಕ ಕಾರಣವೊಂದಕ್ಕೆ ಎರಡು ತಂಡಗಳ ಮಧ್ಯೆ ಈ ಹಿಂದೆ ಗಲಾಟೆ ನಡೆದಿದ್ದು, ಅದರ ಮುಂದುವರಿದ ಭಾಗವಾಗಿ ಗುರುವಾರ ಬೆಳಗ್ಗೆ ಎರಡು ತಂಡಗಳು ಪ್ರತ್ಯೇಕ ಎರಡು ಕಾರುಗಳಲ್ಲಿ ಒಂದನ್ನೊಂದು ಹಿಂಬಾಲಿಸಿಕೊಂಡು ಬೆನ್ನಟ್ಟಿಕೊಂಡು ಬರುತ್ತಿದ್ದಾಗ ಒಂದು ಕಾರು ಪಲ್ಟಿಯಾದ ಘಟನೆ ಹಟ್ಟಿಯಂಗಡಿಯ ಗ್ರಾಮದ ಕನ್ಯಾನ ಬಳಿ ಸಂಭವಿಸಿದೆ. ಈ ಘಟನೆ ಸಂಬಂಧ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಎರಡು ಕಡೆಯಿಂದ ದೂರು – ಪ್ರತಿ ದೂರು ನೀಡಿದ್ದು, ಎರಡು ಪ್ರತ್ಯೇಕ ಕೇಸು ದಾಖಲಾಗಿದೆ.

ಘಟನೆ ಹಿನ್ನೆಲೆ…
ಯುವತಿಯ ಚುಡಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಎರಡು ಗುಂಪುಗಳ ಮೇ 19 ರಂದು ಮರವಂತೆಯಲ್ಲಿ ಗಲಾಟೆ ನಡೆದಿದ್ದು, ಆ ಬಗ್ಗೆ ಗಂಗೊಳ್ಳಿ ಠಾಣೆಯಲ್ಲಿ ದೂರು ಕೂಡ ದಾಖಲಾಗಿತ್ತು. ಅದರ ಮುಂದುವರಿದ ಭಾಗವಾಗಿ ಈ 2 ತಂಡಗಳು ಗುರುವಾರ ಬೆಳಗ್ಗೆ ಗಂಗೊಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ನಾವುಂದ ಕಡೆಯಿಂದ ಒಂದು ಕಾರು ಇನ್ನೊಂದು ಕಾರನ್ನು ಬೆನ್ನಟ್ಟಿಕೊಂಡು ಹೋದಾಗ ತಲ್ಲೂರು – ನೇರಳಕಟ್ಟೆ ಮಾರ್ಗದ ಹಟ್ಟಿಯಂಗಡಿ ಗ್ರಾಮದ ಕನ್ಯಾನ ಬಳಿ ಆಸೀಫ್ ಅವರ ಬೊಲೆನೋ ಕಾರು ಪಲ್ಟಿಯಾಗಿದೆ.

ಇತ್ತಂಡಗಳ ದೂರು..ಪ್ರತಿ ದೂರು…
ನಾವುಂದ ಗ್ರಾಮದ ಬಡಾಕೆರೆ ನಿವಾಸಿ ಮೊಹಮ್ಮದ್ ಆಸೀಫ್ ಎನ್ನುವವರು ದೂರು ನೀಡಿದ್ದು, ಅದರಂತೆ ಮೊಹಮ್ಮದ್ ರಿಯಾಜ್, ಅಶ್ಪಕ್ ಅಹಮ್ಮದ್, ಮೊಹಮ್ಮದ್ ಅಶ್ರಫ್, ಅಹಮ್ಮದ್ ಹಾಗೂ ಸತೀಶ್ ವಿರುದ್ಧ ಕೇಸು ದಾಖಲಾಗಿದೆ.

ಪ್ರತಿದೂರು
ಮಹಮ್ಮದ್ ಆಶ್ರಫ್ ಅವರು ಪ್ರತಿ ದೂರು ನೀಡಿದ್ದು, ಅದರಂತೆ ಆಸೀಫ್ ಹಾಗೂ ಇತರೆ ನಾಲ್ವರ ವಿರುದ್ಧ ಕೇಸು ದಾಖಲಾಗಿದೆ.

ಇದನ್ನೂ ಓದಿರಿ-

ಬೆಳ್ಳಂಬೆಳಗ್ಗೆ ಮಚ್ಚು ಹಿಡಿದು ಕಾರು ಚೇಸ್: ದುಷ್ಕರ್ಮಿಗಳ ಹೈಡ್ರಾಮಕ್ಕೆ ಬೆಚ್ಚಿಬಿದ್ದ ಕುಂದಾಪುರ ಜನರು

(ವರದಿ- ಯೋಗೀಶ್ ಕುಂಭಾಸಿ)

Comments are closed.