ಕುಂದಾಪುರ: ಕೋವಿಡ್-19 ಕೊರೋನಾ ಸಂಬಂಧಿಸಿದಂತೆ ಪ್ರಧಾನ ಮಂತ್ರಿಯವರ ಪರಿಹಾರ ನಿಧಿಗೆ ದಾನಿ ವಕ್ವಾಡಿ ನಿವಾಸಿ ಹಳ್ನಾಡು ಶೇಖರ್ ಶೆಟ್ಟಿ ಅವರು ವೈಯಕ್ತಿಕವಾಗಿ 50 ಸಾವಿರದ ಚೆಕ್ ಅನ್ನು ಕುಂದಾಪುರ ತಹಶಿಲ್ದಾರ್ ತಿಪ್ಪೆಸ್ವಾಮಿ ಅವರಿಗೆ ಗುರುವಾರದಂದು ಮಿನಿವಿಧಾನಸೌಧದ ತಹಶಿಲ್ದಾರ್ ಕಚೇರಿಯಲ್ಲಿ ಹಸ್ತಾಂತರಿಸಿದರು.
ಚೆಕ್ ಸ್ವೀಕರಿಸಿ ಮಾತನಾಡಿದ ತಹಸಿಲ್ದಾರ್, ಪ್ರಪಂಚದಾದ್ಯಂತ ಕೊರೋನಾದಂತಹ ಮಾರಕ ಖಾಯಿಲೆಯಿರುವ ಇಂತಹ ಪರಿಸ್ಥಿತಿಯಲ್ಲಿ ಜನರ ಆರೋಗ್ಯ ಮತ್ತು ಆರ್ಥಿಕ ಚಟುವಟಿಕೆಗಳಿಗೆ ಸಹಕಾರ ಅತ್ಯಗತ್ಯ. ಈ ನಿಟ್ಟಿನಲ್ಲಿ ದಾನಿಗಳು ಮುಂದೆ ಬರುತ್ತಿರುವುದು ನಿಜಕ್ಕೂ ಶ್ಲಾಘನೀಯ ವಿಚಾರ ಎಂದರು.
Comments are closed.