ಕರಾವಳಿ

ಸುಟ್ಟ ನೋವಿನಿಂದ ನರಳುತ್ತಿದ್ದ ಗೋವಿಗೆ ಚಿಕಿತ್ಸೆ ಕಲ್ಪಿಸಿದ ಗಂಗೊಳ್ಳಿ ಹಿಂ.ಜಾ.ವೇ

Pinterest LinkedIn Tumblr

ಕುಂದಾಪುರ: ವಾರಗಳಿಂದ ಸುಟ್ಟ ನೋವಿನಲ್ಲಿ ನರಳಾಡುತ್ತಿದ್ದ ಜಾನುವಾರನ್ನು ಹಿಡಿದ ಹಿಂಜಾವೇ ಕಾರ್ಯಕರ್ತರು ಪಶುವೈದ್ಯರ ಮೂಲಕ ಚಿಕಿತ್ಸೆ ಕೊಡಿಸಿದ್ದಾರೆ.

ಕಳೆದ ಒಂದು ವಾರದ ಹಿಂದೆ ಯಾರೋ ಕಿಡಿಗೇಡಿಗಳು ಜಾನುವಾರುವಿನ ಮೈಮೇಲೆ ಬಿಸಿನೀರು ಹಾಕಿದ್ದು ಗೋವಿನ ಹೊಟ್ಟೆ ಭಾಗ ಸಂಪೂರ್ಣ ಸುಟ್ಟುಹೋಗಿತ್ತು. ಈ ಸುಟ್ಟ ನೋವಿನಿಂದ ನರಳುತ್ತಿರುವ ಗೋವನ್ನು ಇಂದು ಗಂಗೊಳ್ಳಿ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಹಿಡಿದು ಗಂಗೊಳ್ಳಿ ಪ್ರಾಥಮಿಕ ಪಶು ಚಿಕಿತ್ಸಾ ಕೇಂದ್ರದ ಪರೀಕ್ಷರಾದ ರಾಘವೇಂದ್ರ ಶೆಟ್ಟಿಯವರ ಮೂಲಕ ಸೂಕ್ತ ಚಿಕಿತ್ಸೆ ಕಲ್ಪಿಸಿದರು.

ಹಿಂಜಾವೇ ಕಾರ್ಯಕರ್ತರ ಈ ಮಾನವೀಯ ಕಾರ್ಯವನ್ನು ಜನರು ಶ್ಲಾಘಿಸಿದ್ದಾರೆ.

Comments are closed.