ಕರಾವಳಿ

ಮದುವೆಯಾಗಬೇಕೆಂದು ಬರೆದುಕೊಡಲು ನಿರಾಕರಿಸಿದ ಮಹಿಳೆಗೆ ಹಲ್ಲೆ; ಆರೋಪಿಗೆ ಶಿಕ್ಷೆ

Pinterest LinkedIn Tumblr

ಉಡುಪಿ: ಉಡುಪಿಯ ಮಿಷನ್ ಆಸ್ಪತ್ರೆ ರೋಡ್ ಶಾಂತಾನಂದ ರೆಸಿಡೆನ್ಸಿಯ ನೊಂದ ಮಹಿಳೆ ಮನೆಯಲ್ಲಿರುವಾಗ ಆರೋಪಿ ಅನಂತ ಕೃಷ್ಣ ಪ್ರಭು ಚಿಟ್ಪಾಡಿ, ಎಂಬಾತನು ಅಕ್ರಮ ಪ್ರವೇಶ ಮಾಡಿ ಮದುವೆಯಾಗಬೇಕೆಂದು ಬರೆದು ಕೊಡಲು ಒತ್ತಾಯಿಸಿ ಆಕೆ ನಿರಾಕರಿಸಿದ್ದಕ್ಕೆ ಆಕೆಗೆ ಹೊಡೆದು ದೂಡಿ ಹಾಕಿ ಸಾದಾ ಸ್ವರೂಪದ ಗಾಯವನ್ನು ಮಾಡಿ, ಜೀವ ಬೆದರಿಕೆ ಹಾಕಿದ ಅಪರಾಧವನ್ನು ಮಾಡಿರುತ್ತಾರೆ.

ಜನವರಿ 30, 2017 ರಂದು ಮಧ್ಯಾಹ್ನ ಈ ಘಟನೆ ನಡೆದಿತ್ತು. ಈ ಬಗ್ಗೆ ಉಡುಪಿ ಮಹಿಳಾ ಠಾಣೆಯ ಆಗಿನ ಪೊಲೀಸ್ ಉಪನಿರೀಕ್ಷಕಿ ಕಲ್ಪನಾ ತನಿಖೆ ನಡೆಸಿ ದೋಷಾರೋಪಣೆ ಪತ್ರ ಸಲ್ಲಿಸಿದ್ದರು.

ಈ ಪ್ರಕರಣವು ಉಡುಪಿ ಹೆಚ್ಚುವರಿ ಜೆ.ಎಂ.ಎಫ್.ಸಿ. ನ್ಯಾಯಾಲಯದಲ್ಲಿ ವಿಚಾರಣೆ ನಡೆದಿದ್ದು, ಪ್ರಕರಣದಲ್ಲಿ ಸಾಕ್ಷ್ಯ ಹಾಗೂ ಪೂರಕ ಸಾಕ್ಷ್ಯವನ್ನು ಹಾಗೂ ವಾದ ವಿವಾದವನ್ನು ಆಲಿಸಿ ಆರೋಪಿ ವಿರುದ್ಧ ಮೇಲಿನ ಪ್ರಕರಣವು ಸಾಬೀತಾಗಿದೆ ಎಂದು ತೀರ್ಮಾನಿಸಿ ನ್ಯಾಯಾಧೀಶ ಮಂಜುನಾಥ್ ಎಂ.ಎಸ್ ರವರು ಆರೋಪಿಗಳಿಗೆ ಭಾ.ದಂ.ಸಂ ಕಲಂ 448, 323, 506 ರಡಿ ಶಿಕ್ಷೆ ವಿಧಿಸಿದ್ದು, ಆರೋಪಿಯ ಪ್ರಾರ್ಥನೆಯಂತೆ ಅಪರಾಧ ಪರಿವೀಕ್ಷಣಾ ಕಾಯ್ದೆ ಕಲಂ 3ರಡಿ 1 ವರ್ಷಗಳ ಕಾಲ ಅಪರಾಧ ಪರಿವೀಕ್ಷಣೆಯಲ್ಲಿಟ್ಟಿರುವ ಬಗ್ಗೆ ತೀರ್ಪು ನೀಡಿದ್ದಾರೆ.

ಸರ್ಕಾರದ ಪರವಾಗಿ ಹಿಂದಿನ ಪ್ರಭಾರ ಸಹಾಯಕ ಸರ್ಕಾರಿ ಅಭಿಯೋಜಕಿ ಜಯಂತಿ ಪ್ರಕರಣ ನಡೆಸಿದ್ದು, ಕಾನೂನು ಅಧಿಕಾರಿ (ಕಿರಿಯ) ಮಮ್ತಾಜ್ ವಿಚಾರಣೆ ನಡೆಸಿ ವಾದ ಮಂಡಿಸಿದ್ದರು.

Comments are closed.