ಕರಾವಳಿ

ಸತತ ಐದನೇ ಭಾರಿ ಗೆಲುವು ದಾಖಲಿಸಿದ ಶಶಿಧರ ಹೆಗ್ಡೆಯವರ ವಿಜಯೋತ್ಸವ ಮೆರವಣಿಗೆ

Pinterest LinkedIn Tumblr

ಮಂಗಳೂರು, ನವೆಂಬರ್.15 : ಮಂಗಳೂರು ಮಹಾನಗರ ಪಾಲಿಕೆಯ ಚುನಾಚಣೆಯಲ್ಲಿ ಗೆಲುವು ಪಡೆದ ಮಂಗಳೂರು ಮಹಾನಗರ ಪಾಲಿಕೆಯ ದೇರಬೈಲ್ 24ನೇ ವಾರ್ಡಿನ ಕಾಂಗ್ರೆಸ್ ಅಭ್ಯರ್ಥಿ ಎಂ. ಶಶಿಧರ ಹೆಗ್ಡೆ ಯವರ ವಿಜಯೋತ್ಸವ ಮೆರವಣಿಗೆಯು ಗುರುವಾರ ರಾತ್ರಿ ಬಹಳ ವಿಜೃಂಭಣೆಯಿಂದ ನಡೆಯಿತು.

ನಗರದ ಚಿಲಿಂಬಿಗುಡ್ಡೆಯಿಂದ ಹೊರಟ ಬೃಹತ್ ಮೆರವಣಿಗೆಯು ಚಿಲಿಂಬಿ ರಸ್ತೆ ಮೂಲಕ ಉರ್ವಾಸ್ಟೋರ್, ಅಂಗಡಿಗುಡ್ಡ, ದಡ್ಡಲ್‌ಕಾಡ್, ಕೊಟ್ಟಾರ ಕ್ರಾಸ್ ಮೂಲಕ ಕಾಪಿಕಾಡ್ ಶ್ರೀ ಕೋಟೆದ ಬಬ್ಬುಸ್ವಾಮಿ ಕ್ಷೇತ್ರದವರೆಗೆ ಸಾಗಿ ಅಲ್ಲಿಂದ ಮತ್ತೆ ವಾಪಸ್ಸು ಕೊಟ್ಟಾರ್ ಕ್ರಾಸ್, ಕುಂಟಿಕಾನ್,ಕೊಂಚಾಡಿ, ಲೋಹೀತ್ ನಗರ ಮೂಲಕ ಕುಂಟಿಕಾನ್ ವರೆಗೆ ಸಾಗಿ ಅಲ್ಲಿ ಸಮಾಪನಗೊಂಡಿತ್ತು.

ಮೆರವಣಿಗೆಯಲ್ಲಿ ಡಿಜೆ ಸೌಂಡ್ ಅಳವಡಿಸಲಾಗಿದ್ದು, ಪಕ್ಷದ ನೂರಾರು ಕಾರ್ಯಕರ್ತರು ಹಾಗೂ ಹೆಗ್ಡೆಯವರ ಅಭಿಮಾನಿಗಳು ಡಿಜೆ ಗಾನಕ್ಕೆ ನೃತ್ಯದ ಮೂಲಕ ಸಾಗಿದರು. ಅಲ್ಲಲ್ಲಿ ಬೃಹತ್ ಗಾತ್ರದ ಪಟಾಕಿಗಳನ್ನು ಸಿಡಿಸಲಾಯಿತು.

ನವೆಂಬರ್ 12ರಂದು ನಡೆದ ಪಾಲಿಕೆ ಚುನಾವಣೆಯ ಮತ ಏಣಿಕೆ ಗುರುವಾರ ಮಧ್ಯಾಹ್ನದವರೆಗೆ ನಡೆದಿದ್ದು, ಪಹಲಿತಾಂಶ ಹೊರ ಬಿದ್ದಾಗ ಎಂ ಶಶಿಧರ ಹೆಗ್ಡೆ ಯವರು 2235 ಮತಗಳನ್ನು ಪಡೆದು ಗೆಲುವು ಪಡೆದರೆ, ಅವರ ಪ್ರತಿಸ್ಪರ್ದಿ ಬಿಜೆಪಿಯ ಚರಿತ್ ಕುಮಾರ್ 1908 ಪಡೆದು ಪರಭವಗೊಂಡಿದ್ದರು.

ಕಾಂಗ್ರೆಸ್ ಪಕ್ಷದ ಸರಳ ಸಜ್ಜನಿಕೆಯ ಜನಸ್ನೇಹಿ ರಾಜಕಾರಣಿಯಾದ ಎಂ. ಶಶಿಧರ ಹೆಗ್ಡೆಯವರು ಅಭಿವೃದ್ಧಿಪರ ಚಟುವಟಿಕೆಗಳಿಂದ ಮಂಗಳೂರಿನಲ್ಲಿ ಹೆಸರುಗಳಿಸಿದವರು. ತನ್ನ ವಿಧ್ಯಾರ್ಥಿ ಜೀವನದಲ್ಲಿ ಕಾಂಗ್ರೆಸ್ ಪಕ್ಷದ ತತ್ವ ಸಿದ್ಧಾಂತ ಗಳಿಂದ ಆಕರ್ಷಿತ ಗೊಂಡು ಆಲ್ ಕಾಲೇಜ್ ಸ್ಟೂಡೆಂಟ್ ಯೂನಿಯನ್ ನಲ್ಲಿ ವಿಧ್ಯಾರ್ಥಿ ನಾಯಕನಾಗಿ ಬೆಳೆದು ಯುವ ಕಾಂಗ್ರೆಸ್ ನ ನಾಯಕನಾಗಿ ರಾಜಕೀಯ ಜೀವನವನ್ನು ಪ್ರಾರಂಭಿಸಿದರು. ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ರಾಗಿ ಮಂಗಳೂರಿನ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರವಹಿಸಿದ ಇವರು ಲೇಡಿಹಿಲ್ ಕೊಡಿಯಾಲ್ ಬೈಲ್ ರಸ್ತೆ ಅಭಿವೃದ್ಧಿಯ ರುವಾರಿ ಕೂಡ ಆಗಿದ್ದರೆ.

ಮಹಾನಗರ ಪಾಲಿಕೆಯ ಆಡಳಿತದಲ್ಲಿ ಹೆಚ್ಚು ಅನುಭವ ಹೊಂದಿರುವ ಮಂಗಳೂರು ಅಭಿವೃದ್ಧಿಯ ಬಗ್ಗೆ ಸ್ಪಷ್ಟ ಕಲ್ಪನೆ ಹೊಂದಿರುವ ಎಂ ಶಶಿಧರ ಹೆಗ್ಡೆಯವರ ಗೆಲುವು ನಿರೀಕ್ಷಿತವಾಗಿತ್ತು. ಮಂಗಳೂರು ಮಹಾನಗರ ಪಾಲಿಕೆಯ ಚುನಾವಣೆ ಯಲ್ಲಿ ಇವರು ಸತತವಾಗಿ 5 ನೇ ಭಾರಿಗೆ ಗೆಲುವು ಸಾಧಿಸಿದ್ದಾರೆ. ಪ್ರಾರಂಭದ 2 ಅವಧಿ ಯ 10 ವರ್ಷಗಳಲ್ಲಿ ದೇರಬೈಲ್ 24 ವಾರ್ಡನ್ನು ಪ್ರತಿನಿಧಿಸಿದ್ದ ಶಶಿಧರ ಹೆಗ್ಡೆಯವರು ಮೀಸಲಾತಿ ಯ ಕಾರಣದಿಂದ ಬೇರೆ ಕ್ಷೇತ್ರವನ್ನು ಆರಿಸಿಕೊಳ್ಳಬೇಕಾಯಿತು, ಪುನಃ 5 ನೇ ಬಾರಿಗೆ ತಾನು ಈ ಹಿಂದೆ ಪ್ರತಿನಿಧಿಸಿದ್ದ ವಾರ್ಡಿನಲ್ಲಿ ಮತ್ತೊಮ್ಮೆ ಗೆಲುವಿನ ನಗ ಬೀರಿದ್ದಾರೆ.

Comments are closed.