ಕುಂದಾಪುರ: ಗುಜರಾತಿನಿಂದ ಮಂಗಳೂರಿಗೆ ಹಿಂಸಾತ್ಮಕವಾಗಿ ಸಾಗಿಸುತ್ತಿದ್ದ ಜಾನುವಾರುಗಳನ್ನು ಪೊಲೀಸರು ರಕ್ಷಿಸಿದ್ದು ನಾಲ್ವರು ಆರೋಪಿಗಳನ್ನು ಬಂಧಿಸಿದ ಘಟನೆ ಬೈಂದೂರು ಸಮೀಪದ ನಾಗೂರು ಎಂಬಲ್ಲಿ ಗುರುವಾರ ತಡರಾತ್ರಿ ನಡೆದಿದೆ.
ಕುಂದಾಪುರ ಎಎಸ್ಪಿ ಹರಿರಾಂ ಶಂಕರ್ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆದಿದ್ದು ಮಲ್ಲಿಕ್, ಸಮೀರ್, ಸಾಧಿಕ್, ಮಲ್ಲಿಕ್ ಸಾಹಿದ್ ಬಂಧಿತ ಆರೋಪಿಗಳು.
ಗುಜರಾತಿನಿಂದ ಮಂಗಳೂರಿಗೆ ಕಂಟೆನರ್ ವಾಹನದಲ್ಲಿ 32 ಕೋಣ, ಎಮ್ಮೆಗಳನ್ನು ಕಾಲು ಕಟ್ಟಿ ಹಿಂಸಾತ್ಮಕವಾಗಿ ಸಾಗಿಸಲಾಗುತ್ತಿತ್ತು. ಈ ಬಗ್ಗೆ ಪೊಲೀಸರಿಗೆ ಸಿಕ್ಕ ಖಚಿತ ಮಾಹಿತಿ ಆಧಾರದಲ್ಲಿ ಈ ಕಾರ್ಯಾಚರಣೆ ನಡೆಸಲಾಗಿದೆ. ಹಿಂಸಾತ್ಮಕ ಸಾಗಾಟದ ವೇಳೆ 1 ಜಾನುವಾರು ಸಾವನ್ನಪಿದ್ದು ಉಳಿದ ಜಾನುವಾರುಗಳನ್ನು ಬೈಂದೂರು ಪೊಲೀಸರು ರಕ್ಷಿಸಿ ಆರೈಕೆ ಮಾಡಿದ್ದಾರೆ.
ಬೈಂದೂರು ಸಿಪಿಐ ಸುರೇಶ್ ನಾಯಕ್ ಸ್ಥಳಕ್ಕೆ ಭೇಟಿ ನೀಡಿದ್ದು ಪ್ರಕರಣ ದಾಖಲಾಗಿದೆ.
(ವರದಿ- ಯೋಗೀಶ್ ಕುಂಭಾಸಿ)
Comments are closed.