ಕರಾವಳಿ

ಉಡುಪಿ ದೊಡ್ಡಣಗುಡ್ಡೆಯ ವ್ಯಾಯಾಮ ಶಾಲೆಯಲ್ಲಿ ಆಂಜನೇಯ ಭಾವಚಿತ್ರ ವಿರೂಪ ಯತ್ನ

Pinterest LinkedIn Tumblr

ಉಡುಪಿ: ಅನ್ಯಕೋಮಿನ ದುಷ್ಕರ್ಮಿಗಳ ತಂಡವೊಂದು ವ್ಯಾಯಾಮ ಶಾಲೆಯಲ್ಲಿ ಇರಿಸಿದ ಆಂಜನೇಯನ ಭಾವಚಿತ್ರವನ್ನು ವಿರೂಪಗೊಳಿಸಲು ಯತ್ನಿಸಿ ಇಬ್ಬರ ಮೇಲೆ ಹಲ್ಲೆ ನಡೆಸಿದ ಘಟನೆ ಉಡುಪಿ ಪೆರಂಪಳ್ಳಿ ಸಮೀಪದ ದೊಡ್ಡಣಗುಡ್ಡೆ ಬಳಿ ಗುರುವಾರ ರಾತ್ರಿ ನಡೆದಿದೆ.

ಇಲ್ಲಿನ ವ್ಯಾಯಾಮ ಶಾಲೆಯಲ್ಲಿ ಪ್ರತಿನಿತ್ಯ ಯುವಕರು ವ್ಯಾಯಾಮ ತರಬೇತಿ ನಡೆಸುತ್ತಿದ್ದು, ಗುರುವಾರ ಸಂಜೆ ವೇಳೆ ಕೆಲವೊಂದು ಅನ್ಯಕೋಮಿನ ಯುವಕರು ಒಳಪ್ರವೇಶಿಸಿ ಆಂಜನೇಯನ ಭಾವಚಿತ್ರವಿರುವಲ್ಲಿ ಬನಿಯನ್ ಹಾಕಿ ಸೆಲ್ಫಿ ತೆಗೆದುದಿದ್ದು ಇದನ್ನು ಪ್ರಶ್ನಿಸಿದ ಯುವಕರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದೆ. ಘಟನೆ ಬಳಿಕ ನೂರಾರು ಸಂಖ್ಯೆಯಲ್ಲಿ ಜನರು ಸೇರಿದ್ದು ಸ್ವಲ್ಪ ಸಮಯ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು.

ಎಸ್ಪಿ ನಿಶಾ ಜೇಮ್ಸ್, ಡಿವೈಎಸ್ಪಿ ಟಿ. ಜೈ ಶಂಕರ್ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದು ಬಂದೋಬಸ್ತ್ ವ್ಯವಸ್ಥೆ ಮಾಡಿದ್ದಾರೆ.

Comments are closed.