ಕರಾವಳಿ

ಪ್ರವಾದಿ ಮಹ್ಮದ್ ಪೈಗಂಬರ್ ಜನ್ಮದಿನ: ರೋಗಿಗಳಿಗೆ ಹಣ್ಣು ಹಂಪಲು ವಿತರಣೆ

Pinterest LinkedIn Tumblr

ಕುಂದಾಪುರ: ಪ್ರವಾದಿ ಮಹ್ಮದ್ ಪೈಗಂಬರ್ ಅವರ ಜನ್ಮದಿನಾಚರಣೆ ಈದ್ ಮಿಲಾದುನ್ನಬಿಯ ಪ್ರಯುಕ್ತ ಎಸ್.ಎಸ್.ಎಫ್,ಕುಂದಾಪುರ ಹಾಗು ಕುಂದಾಪುರ ದರ್ಗಾ ಘಟಕದ ವತಿಯಿಂದ ಸ್ಥಳೀಯ ಸರ್ಕಾರಿ ಆಸ್ಪತ್ರೆಯ ರೋಗಿಗಳಿಗೆ ಹಣ್ಣು ಹಂಪಲುಗಳನ್ನು ವಿತರಿಸುವ ಕಾರ್ಯಕ್ರಮ ನಡೆಯಿತು.

ಪುರಸಭೆ ಸದಸ್ಯ ಅಬ್ಬು ಮಹ್ಮದ್ ಹಾಗೂ ಎಸ್.ಎಸ್.ಎಫ್. ಸದಸ್ಯರು ಹಾಗೂ ದರ್ಗಾ ಘಟಕದ ಸದಸ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದು ರೋಗಿಗಳನ್ನು ಉಪಚರಿಸಿದರು. ಆಸ್ಪತ್ರೆಯ ಮುಖ್ಯಾಧಿಕಾರಿ ಡಾ. ರಾಬಟ್ ಘಟಕಗಳ ಮಾನವೀಯ ಸೇವೆಗಳನ್ನು ಹುರಿದುಂಬಿಸಿ ಕೃತಜ್ಞತೆಗಳನ್ನು ಸಲ್ಲಿಸಿದರು.

Comments are closed.