ಕರಾವಳಿ

ಕೋಟ ಸಮೀಪದ ಅಚ್ಲಾಡಿಯಲ್ಲಿ ‘ಆಪರೇಶನ್ ಚೀತಾ’: ಗಾಯಗೊಂಡಿದ್ದ ಚಿರತೆ ಸೆರೆ

Pinterest LinkedIn Tumblr

ಕುಂದಾಪುರ: ಉಡುಪಿ ಜಿಲ್ಲೆಯ ಕೋಟ ಸಮೀಪದ ಮಧುವನ ಅಚ್ಲಾಡಿಯಲ್ಲಿ ಮಂಗಳವಾರ ಬೃಹತ್ ಗಾತ್ರದ ಚಿರತೆಯೊಂದನ್ನು ಸೆರೆ ಹಿಡಿಯಲಾಗಿದೆ.

ಗಾಯಗೊಂಡ ಸ್ಥಿತಿಯಲ್ಲಿ ಇಲ್ಲಿನ ಹಾಡಿಯೊಂದರಲ್ಲಿ ಚಿರತೆ ಪತ್ತೆಯಾಗಿದ್ದು ಸ್ಥಳೀಯ ಮಹಿಳೆಯೊಬ್ಬರು ಇದನ್ನು ಕಂಡಿದ್ದು ಜನರನ್ನು ನೋಡಿ ಬೆದರಿದ ಚಿರತೆ ಹತ್ತಿರದ ಮೋರಿಯೊಂದರಲ್ಲಿ ಅಡಗಿಕೊಂಡಿತ್ತು. ಕೂಡಲೇ ಸ್ಥಳೀಯರು ಅರಣ್ಯ ಇಲಾಖೆಯವರಿಗೆ ಸುದ್ದಿಮಟ್ಟಿಸಿದ್ದು ಅರಣ್ಯಾಧಿಕಾರಗಳು ಸ್ಥಳಕ್ಕಾಗಮಿಸಿ‌ ಬೋನು ಅಳವಡಿಸಿ ಕಾರ್ಯಾಚರಣೆ ನಡೆಸಿ ಈ ಗಂಡು ಚಿರತೆಯನ್ನು ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ಗಾಯಗೊಂಡ ಚಿರತೆಗೆ ಚಿಕಿತ್ಸೆ ನೀಡಲಾಗಿದೆ. ಬ್ರಹ್ಮಾವರ ಉಪವಲಯ ಅರಣ್ಯಾಧಿಕಾರಿ ಜೀವನ್ ಶೆಟ್ಟಿ ಹಾಗೂ ಸಿಬ್ಬಂದಿ ಕಾರ್ಯಚರಣೆಯಲ್ಲಿ ಸಹಕರಿಸಿದರು.‌

Comments are closed.