ಕರಾವಳಿ

ರೆಡ್ ಕ್ರಾಸ್ ಸಂಸ್ಥಾಪಕ ಸರ್ ಜೀನ್ ಹೆನ್ರಿ ಡ್ಯುನಾಂಟ್ ಪುಣ್ಯತಿಥಿ ಆಚರಣೆ

Pinterest LinkedIn Tumblr

ಉಡುಪಿ: ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಉಡುಪಿ ಜಿಲ್ಲಾ ಘಟಕದ ವತಿಯಿಂದ ರೆಡ್ ಕ್ರಾಸ್ ಸಂಸ್ಥಾಪಕ ಸರ್ ಜೀನ್ ಹೆನ್ರಿ ಡ್ಯುನಾಂಟ್ ಅವರ 109ನೇ ವರ್ಷದ ಪುಣ್ಯತಿಥಿಯನ್ನು ಬುಧವಾರ ರೆಡ್ ಕ್ರಾಸ್ ಭವನದ ಹೆನ್ರಿ ಡ್ಯುನಾಂಟ್ ಹಾಲ್ನಲ್ಲಿ ಆಚರಿಸಲಾಯಿತು.

ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಉಡುಪಿ ಜಿಲ್ಲಾ ಘಟಕದ ಸಭಾಪತಿ ಬಸ್ರೂರು ರಾಜೀವ್ ಶೆಟ್ಟಿ, ಸರ್ ಜೀನ್ ಹೆನ್ರಿ ಡ್ಯುನಾಂಟ್ರವರನ್ನು ಸ್ಮರಿಸುತ್ತಾ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ರೆಡ್ ಕ್ರಾಸ್ ಸಂಸ್ಥೆಯಲ್ಲಿ ದುರ್ಬಲರ, ದೀನ ದಲಿತರ ಸೇವೆಗೆ ದುಡಿದ ನಾಯಕರಲ್ಲಿ ಅಗ್ರಗಣ್ಯರು. ಅವರ ಮಾನವೀಯ ಸೇವೆ, ಕಾಯಕ ನಿಷ್ಠೆ, ಶಾಂತಿ ಹಾಗೂ ಸಾಮರಸ್ಯವನ್ನು ನಾವೆಲ್ಲರೂ ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಜಿಲ್ಲಾ ಘಟಕದ ಗೌರವ ಖಜಾಂಚಿ ಟಿ. ಚಂದ್ರಶೇಖರ್, ಗೌರವ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ ಕೆ, ಜಯರಾಮ್ ಆಚಾರ್ಯ, ಯುವರೆಡ್ ಕ್ರಾಸ್ ಡೈರೆಕ್ಟರ್, ಪದ್ಮಾ ಕಿಣಿ, ಜೂನಿಯರ್ ರೆಡ್ ಕ್ರಾಸ್ ಡೈರೆಕ್ಟರ್ ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದು, ಸರ್ ಹೆನ್ರಿ ಡ್ಯುನಾಂಟ್ರವರ ಭಾವಚಿತ್ರಕ್ಕೆ ಪುಷ್ಪ ನಮನವನ್ನು ಸಲ್ಲಿಸಿದರು.

Comments are closed.