ಕರಾವಳಿ

ಅನರ್ಹ ಬಿಪಿಎಲ್ ಕಾರ್ಡುದಾರರು ಪಡಿತರ ಚೀಟಿ ಹಿಂದಿರುಗಿಸಲು ಕೊನೆಯ ಅವಕಾಶ

Pinterest LinkedIn Tumblr

ಉಡುಪಿ: ಅನರ್ಹ ಕುಟುಂಬಗಳು ಹೊಂದಿರುವ ಬಿಪಿಎಲ್ ಪಡಿತರ ಚೀಟಿಗಳನ್ನು ಹಿಂದಿರುಗಿಸುವಂತೆ ಬಹಳಷ್ಟು ಬಾರಿ ತಿಳುವಳಿಕೆ ಮತ್ತು ಎಚ್ಚರಿಕೆಗಳನ್ನು ನೀಡಿದ್ದರೂ ಸಹ ಇನ್ನೂ ಬಹಳಷ್ಟು ಅನರ್ಹ ಕುಟುಂಬಗಳು ಅಂದರೆ ಆದಾಯ ತೆರಿಗೆ ಪಾವತಿಸುತ್ತಿರುವವರು, ಸರ್ಕಾರಿ, ಅರೆ ಸರ್ಕಾರಿ, ನಿಗಮ, ಮಂಡಳಿ, ಸಹಕಾರ ಸಂಘಗಳ ನೌಕರರುಗಳು ವಾರ್ಷಿಕ 1,20,000 ಕ್ಕಿಂತ ಹೆಚ್ಚಿನ ವರಮಾನ ಹೊಂದಿರುವವರು, 4 ಚಕ್ರದ ವಾಹನಗಳನ್ನು ಸ್ವಂತಕ್ಕಾಗಿ ಹೊಂದಿರುವವರು, ಪಟ್ಟಣ ಪ್ರದೇಶದಲ್ಲಿ 1000 ಚದರ ಅಡಿಗಿಂತ ಹೆಚ್ಚಿನ ವಿಸ್ತೀರ್ಣದ ವಾಸದ ಮನೆ ಹೊಂದಿರುವವರು ಬಿಪಿಎಲ್ ಪಡಿತರ ಚೀಟಿ ಹೊಂದಿರುವ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದೆ.

ಮೇಲ್ಕಂಡ ಮಾಹಿತಿಗಳನ್ನು ಇಲಾಖೆ ಪತ್ತೆ ಹಚ್ಚಿದ ನಂತರ ಅನರ್ಹ ಕಾರ್ಡುದಾರರಿಗೆ ವಿಧಿಸಬಹುದಾದ ದಂಡ ಮತ್ತು ಶಿಕ್ಷೆಯಿಂದ ತಪ್ಪಿಸಿಕೊಳ್ಳುವ ಸಲುವಾಗಿ ಅಕ್ಟೋಬರ್ 31 ರ ಒಳಗೆ ಅನರ್ಹ ಬಿಪಿಎಲ್ ಕಾರ್ಡುದಾರರು ಸ್ವ-ಇಚ್ಛೆಯಿಂದ ಬಿಪಿಎಲ್ ಪಡಿತರ ಚೀಟಿಗಳನ್ನು ಸಮೀಪದ ಆಹಾರ ಇಲಾಖೆ ಕಚೇರಿಗೆ ನೀಡಿ ಎಪಿಎಲ್ ಪಡಿತರ ಚೀಟಿ ಪಡೆದುಕೊಳ್ಳುವಂತೆ ಜಿಲ್ಲಾಧಿಕಾರಿ ಜಗದೀಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Comments are closed.