ಕರಾವಳಿ

ಉಡುಪಿಯ ಶಿರ್ವದ ಶಾಲಾ ಕ್ಯಾಬಿನ್ ಒಳಗೆ ಸಹಾಯಕ ಪಾದ್ರಿ ಆತ್ಮಹತ್ಯೆ

Pinterest LinkedIn Tumblr

ಉಡುಪಿ: ಡಾನ್ ಬಾಸ್ಕೊ ಶಾಲೆ ಶಿರ್ವದಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸುತ್ತಿದ್ದ ಸಹಾಯಕ ಪಾದ್ರಿಯೋರ್ವರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ.

ಪ್ರಸ್ತುತ ಸಹಾಯಕ ಪ್ಯಾರಿಷ್ ಪಾದ್ರಿಯಾಗಿ ಮತ್ತು ಡಾನ್ ಬಾಸ್ಕೊ ಶಾಲೆಯ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸುತ್ತಿದ್ದ ಫಾ. ಮಹೇಶ್ ಡಿಸೋಜಾ (36) ಆತ್ಮಹತ್ಯೆಗೆ ಶರಣಾದವರು. ಫ್ಯಾನ್‌’ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಮೂಲತಃ ಮೂಡಬೆಳ್ಳೆಯವರಾಗಿದ್ದ ಫಾ. ಮಹೇಶ್ ಏಪ್ರಿಲ್ 15, 2013 ರಲ್ಲಿ ಗುರು ದೀಕ್ಷೆ ಪಡೆದಿದ್ದು ಪೌರೋಹಿತ್ಯಕ್ಕೆ ನೇಮಿಸಲಾಗಿತ್ತು. ಮೌಂಟ್ ರೋಸರಿ ಕಲ್ಯಾಣ್’ಪುರದ ಮಿಲಾಗ್ರೆಸ್’ನಲ್ಲಿ ಸಹಾಯಕ ಪ್ಯಾರಿಷ್ ಪಾದ್ರಿಯಾಗಿ ಸೇವೆ ಸಲ್ಲಿಸಿದ್ದರು. 2016ರಲ್ಲಿ ಅವರನ್ನು ಶಿರ್ವಾಕ್ಕೆ ವರ್ಗಾಯಿಸಲಾಗಿತ್ತು.

Comments are closed.