ಕರಾವಳಿ

ವೆನ್ಲಾಕ್ ಆಸ್ಪತ್ರೆ : ಕಾರಣ್ಯ ಯೋಜನೆಯಡಿ ಹಸಿದವರಿಗೆ ಅನ್ನ ನೀಡಿದ ಮಿಥುನ್ ರೈ ಬರ್ತ್ ಡೇ

Pinterest LinkedIn Tumblr

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಎಂ. ಅವರ ಹುಟ್ಟುಹಬ್ಬವನ್ನು ಅವರ ಅಭಿಮಾನಿಗಳು ಸರಕಾರಿ ವೆನ್ಲಾಕ್ ಆಸ್ಪತ್ರೆಯ ಆವರಣದಲ್ಲಿ ಅರ್ಥಪೂರ್ಣವಾಗಿ ಆಚರಿಸಿದರು.

ವೆನ್ಲಾಕ್ ಆಸ್ಪತ್ರೆಯ ಒಳರೋಗಿಗಳ ಜೊತೆಗಾರರಿಗೆ ಎಂಫ್ರೆಂಡ್ಸ್ ಟ್ರಸ್ಟ್ ಪ್ರತಿದಿನ ರಾತ್ರಿಯ ಉಪಹಾರ ನೀಡುವ ಕಾರುಣ್ಯ ಯೋಜನೆ ಯಲ್ಲಿ ಮಿಥುನ್ ರೈ ಮತ್ತು ಅವರ ಅಭಿಮಾನಿಗಳು ಭಾಗವಹಿಸಿ, ಸುಮಾರು 500ರಷ್ಟು ಮಂದಿಗೆ ನಿತ್ಯದ ಉಪಹಾರದ ಜೊತೆಗೆ ಬಾಳೆಹಣ್ಣು, ಪಾಯಸ, ಸಿಹಿ ತಿಂಡಿ ವಿತರಿಸಿದರು.

ಎಂಫ್ರೆಂಡ್ಸ್ ಅಧ್ಯಕ್ಷ ಮೊಹಮ್ಮದ್ ಹನೀಫ್ ಗೋಳ್ತಮಜಲು ಅಭಿನಂದಿಸಿದರು. ಯುವ ಕಾಂಗ್ರೆಸ್ ಮುಖಂಡರಾದ ಗಿರೀಶ್ ಆಳ್ವ, ಪ್ರಸಾದ್ ಮಲ್ಲಿ, ಚೇತನ್, ರಮಾನಂದ ಪೂಜಾರಿ, ರೆಹಮಾನ್ ಖಾನ್ ಕುಂಜತ್ತಬೈಲ್, ಜಯಕುಮಾರ್ ಶೆಟ್ಟಿ, ಸೌಹಾನ್ ಎಸ್.ಕೆ., ಸುಜಿತ್ ಶೆಟ್ಟಿ ಪುತ್ತೂರು, ಅಶೋಕ್ ಪೂಜಾರಿ ಮೂಲ್ಕಿ, ಹಬೀಬ್ ಸುರತ್ಕಲ್ ಮತ್ತಿತರರು ಉಪಸ್ಥಿತರಿದ್ದರು.

ಎಂಫ್ರೆಂಡ್ಸ್ ಕಾರ್ಯದರ್ಶಿ ಮುಹಮ್ಮದ್ ಆರಿಫ್ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಬಡ ಫಲಾನುಭವಿಗಳು ಆಹಾರ ಸ್ವೀಕರಿಸಿ, ಮಿಥುನ್ ಅವರಿಗೆ ಶುಭ ಹಾರೈಸಿದರು.

Comments are closed.