ಉಡುಪಿ: ಬುಧವಾರ ಶಾಲೆಗೆ ರಜೆಯಿದ್ದ ಹಿನ್ನೆಲೆ ಸಮುದ್ರ ತೀರದಲ್ಲಿ ಮೀನಿಗೆ ಗಾಳ ಹಾಕುತ್ತಿದ್ದಾಗ ಬೃಹತ್ ಅಲೆಗೆ ಕೊಚ್ಚಿಕೊಂಡು ಹೋಗಿ ವಿದ್ಯಾರ್ಥಿ ಮೃತಪಟ್ಟ ಘಟನೆ ಸಾಲಿಗ್ರಾಮ ಸಮೀಪ ಪಾರಂಪಳ್ಳಿ ಪಡುಕೆರೆಯ ಅಮಾಸೆಕಡು ಎಂಬಲ್ಲಿ ನಡೆದಿದೆ.
ಪಾರಂಪಳ್ಳಿ ಪಡುಕರೆಯ ಲತಾ ಮತ್ತು ಕೃಷ್ಣಾ ದಂಪತಿಯ ಪುತ್ರ ವಿಕಾಸ್ (14) ಮೃತ ಬಾಲಕ. ವಿಕಾಸ್ ಕೋಟ ವಿವೇಕ ಬಾಲಕರ ಪ್ರೌಢಶಾಲೆಯ 8 ನೇ ತರಗತಿ ವಿದ್ಯಾರ್ಥಿಯಾಗಿದ್ದು, ಗಾಂಧಿ ಜಯಂತಿಯ ಪ್ರಯುಕ್ತ ಶಾಲೆಗೆ ಮಧ್ಯಾಹ್ನ ರಜೆ ಇದ್ದ ಕಾರಣ ಬಾಲಕ ಸಮುದ್ರ ತೀರದಲ್ಲಿ ಗಾಳ ಹಾಕುತ್ತಿದ್ದ ಎನ್ನಲಾಗಿದೆ. ಮೃತ ವಿದ್ಯಾರ್ಥಿಗೆ ತಂದೆ, ತಾಯಿ ಮತ್ತು ಸಹೋದರರು ಇದ್ದಾರೆ.
ಈ ಬಗ್ಗೆ ಕೋಟ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Comments are closed.