ಕರಾವಳಿ

ಇತ್ತೀಚಿಗೆ ನಿಧನರಾದ ಪ್ರಸಿದ್ಧ ಮದ್ದಳೆಗಾರ ವಿನಯ ಆಚಾರ್ಯ ಕುಟುಂಬಕ್ಕೆ ಪಟ್ಲ ಫೌಂಡೇಶನ್‌ನಿಂದ ಸಹಾಯಹಸ್ತ

Pinterest LinkedIn Tumblr

ಮಂಗಳೂರು: ಅನಾರೋಗ್ಯದಿಂದ ಆಸ್ಪತ್ರೆಗೆ ಒಳರೋಗಿಯಾಗಿ ದಾಖಲಾಗಿ ಚಿಕಿತ್ಸೆ ಫಲಕಾರಿಯಾಗದೆ ನಿಧನರಾದ ಯಕ್ಷಗಾನದ ಪ್ರಸಿದ್ಧ ಮದ್ದಳೆಗಾರ ವಿನಯ ಆಚಾರ್ಯ ಕಡಬರ ಕುಟುಂಬಕ್ಕೆ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ವತಿಯಿಂದ 70ಸಾವಿರ ರೂ. ಮೃತರ ಕುಟುಂಬಕ್ಕೆ ನೀಡಲಾಯಿತು.

ಆಸ್ಪತ್ರೆಗೆ ದಾಖಲಾದ ದಿನದಂದು ಮೃತರ ಮನೆಯವರ ಕೋರಿಕೆ ಮೇರೆಗೆ ರೂ. 25,000 ನೀಡಲಾಗಿತ್ತು. ಉಳಿದ ಮೊತ್ತವನ್ನು ಬಳಿಕ ಪೌಂಡೇಶನಿನ ಕೇಂದ್ರ ಕಚೇರಿ ಯಲ್ಲಿ ಕುಟುಂಬ ಸದಸ್ಯರಿಗೆ ಹಸ್ತಾಂತರಿಸಲಾಯಿತು.

ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ ಮತ್ತು ಕೋಶಾಧಿಕಾರಿ ಸುದೇಶ್‌ಕುಮಾರ್ ರೈ ಚಕ್ ಹಸ್ತಾಂತರಿಸಿದರು.

ಪಟ್ಲ ಫೌಂಡೇಶನ್ ಯಕ್ಷಗಾನ ಕಲಾವಿದರಿಗಾಗಿ ಆರೋಗ್ಯ ವಿಮೆ ಯೋಜನೆ ಜಾರಿಗೆ ತಂದಿದ್ದು, ಈ ಯೋಜನೆಯಡಿ ಹೆಸರು ನೋಂದಾಯಿಸಿದೇ ಇರುವ ಕಲಾವಿದರು ಮುಂದಿನ ಸಂಭ್ರಮದ ದಿನದಂದು ಹೆಸರು ನೋಂದಾಯಿಸುವಂತೆ ಕೋರಿದೆ.

Comments are closed.