ಕರಾವಳಿ

ಆನೆಗುಡ್ಡೆಯಲ್ಲಿ ಅಂಗಾರಕ ಸಂಕಷ್ಟ ಚತುರ್ಥಿ ಸಂಭ್ರಮ: ಭಕ್ತ ಸಾಗರ!

Pinterest LinkedIn Tumblr

ಕುಂದಾಪುರ: ಪುರಾಣ ಪ್ರಸಿದ್ಧ ಕುಂಭಾಸಿ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದಲ್ಲಿ ಅಂಗಾರಕ ಸಂಕಷ್ಟ ಚತುಥಿ೯ ಪ್ರಯುಕ್ತ ಮಂಗಳವಾರ ವಿಶೇಷ ಪೂಜಾ ಕಾರ್ಯಕ್ರಮಗಳು ಜರುಗಿದವು. ಶ್ರೀ ದೇವರಿಗೆ ಸಹಸ್ರ ನಾಲಿಕೇರ ಗಣಯಾಗ, ತ್ರಿಕಾಲ ಪೂಜೆ, ದೊಡ್ಡ ರಂಗಪೂಜೆ, ಸಾರ್ವಜನಿಕವ ಮಹಾ ಅನ್ನಸಂತಪ೯ಣೆ, ಸಾಂಸ್ಕೃತಿಕ ಕಾಯ೯ಕ್ರಮದ ಅಂಗವಾಗಿ ಉಡುಪಿ ನಾರಾಯಣ ಸರಳಾಯ ಇವರ ಬಳಗದಿಂದ ಸುಗಮ ಸಂಗೀತ ಕಾಯ೯ಕ್ರಮ ನಡೆಯಿತು.

ಹರಿದು ಬಂದ ಭಕ್ತ ಸಾಗರ: ಮುಂಜನೆಯೇ ಶ್ರೀ ದೇವರ ದಶ೯ನ ಪಡೆಯಲು ಭಕ್ತರ ಸರತಿ ಸಾಲು ಹೆಚ್ಚಿದ್ದು ತಮ್ಮ ಭಕ್ತಿ ಭಾವದಿಂದ ಪಾರಕಷ್ಟೆ ಮೆರೆದರು. ಅಪರಾಹ್ನದ ವಿಶೇಷ ಭೋಜನ ಪ್ರಸಾದಕ್ಕೆ ಸುಮಾರು 5000 ಭಕ್ತರು ಭಾಗವಹಿಸಿ ಪ್ರಸಾದ ಸ್ವೀಕರಿಸಿದರು. ದೇವಳದ ಹಿರಿಯ ಧರ್ಮದರ್ಶಿ ಕೆ.ಸೂರ್ಯನಾರಾಯಣ ಉಪಾಧ್ಯಾಯ, ಆಡಳಿತ ಧರ್ಮದರ್ಶಿ ಶ್ರೀರಮಣ ಉಪಾಧ್ಯಾಯ, ಪರ್ಯಾಯ ಅರ್ಚಕರ ಚಂದ್ರಕಾಂತ ಉಪಾಧ್ಯಾಯ,ಮೇನೆಜರ್ ನರೇಶ್ ಕಾರಂತ್ ಮೊದಲಾದವರು ಉಪಸ್ಥಿತರಿದ್ದರು..

Comments are closed.