ಕರಾವಳಿ

ಕುಂದಾಪುರದ ಹೆನ್ನಾಬೈಲು-ಮಾವಿನಮನೆ ರಸ್ತೆ ದುರವಸ್ಥೆ: ಸಾರ್ವಜನಿಕರ ಆಕ್ರೋಷ

Pinterest LinkedIn Tumblr

ಕುಂದಾಪುರ: ಕುಂದಾಪುರ ತಾಲೂಕಿನ ಸಿದ್ದಾಪುರ ಮತ್ತು ಹೊಸಂಗಡಿ ಗ್ರಾಮ ವ್ಯಾಪ್ತಿಗೆ ಸೇರಿದ ಹೆನ್ನಾಬೈಲು ಎನ್ನುವಲ್ಲಿನಿಂದ ಮಾವಿನಮನೆಗೆ ಹೋಗುವ ಸಂಪರ್ಕ ರಸ್ತೆ ಸಂಪೂರ್ಣ ಹದಗೆಟ್ಟಿದ್ದು ಸಂಚಾರಕ್ಕೆ ದುಸ್ತರವಾಗಿದೆ.

ಸುಮಾರು 150 ರಿಂದ 200 ಕ್ಕೂ ಹೆಚ್ಚು ಮನೆಗಳಿಗೆ ಸಂಪರ್ಕ ಕಲ್ಪಿಸುವ ಈ ರಸ್ತೆಯು ಹದಗೆಟ್ಟಿದ್ದು ಕೂಲಿ ಕಾರ್ಮಿಕರು ಮತ್ತು ಶಾಲಾ-ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳು ಹಾಗೂ ನಿತ್ಯ ಪ್ರಯಾಣಿಕರು ಸಮಸ್ಯೆ ಎದುರಿಸುವಂತಾಗಿದೆ. 5 ಕಿಲೋಮೀಟರ್ ರಸ್ತೆಯು ಕೂಡ ಸಂಪೂರ್ಣ ಹದಗೆಟ್ಟಿದ್ದು ಸಮರ್ಪಕ ಚರಂಡಿ ಇಲ್ಲದ ಕಾರಣ ಮಳೆಯ ನೀರು ದಾರಿಯ ಮಧ್ಯದಲ್ಲಿ ಹರಿದು ಕ್ರತಕ ಕೆರೆ ಸ್ರಷ್ಟಿಯಾಗುತ್ತಿದೆ.

ಸುಗಮ ಸಂಪರ್ಕ ರಸ್ತೆ ನಿರ್ಮಾಣಕ್ಕಾಗಿ ಸ್ಥಳೀಯಾಡಳಿತ ಸೇರಿದಂತೆ ಶಾಸಕರಿಗೂ ಕೂಡ ಈ ಭಾಗದ ಜನರು ಮನವಿ ಸಲ್ಲಿಸಿದ್ದರೂ ಕೂಡ ಈವರೆಗೂ ಯಾವುದೇ ಪ್ರಯೋಜವೂ ಆಗಿಲ್ಲ. ಸಂಬಂದಪಟ್ಟವರು ಇನ್ನಾದರೂ ಕೂಡ ಸಮಸ್ಯೆ ಪರಿಹಾರಕ್ಕೆ ಮುಂದಾಗಬೇಕೆಂದು ಸ್ಥಳೀಯರಾದ ಭುಜಂಗ ಶೆಟ್ಟಿ ಮತ್ತು ಶಬರೀಶ್ ಶೆಟ್ಟಿ ಆಗ್ರಹಿಸಿದ್ದಾರೆ.

Comments are closed.